ಪಡಿತರಕ್ಕೆ ಬಂದ ಕೆಲವು ಮಹಿಳೆಯರೊಂದಿಗೆ ಕೇಂದ್ರ ಸರಕಾರ ಪ್ರತೀ ಕುಟುಂಬಕ್ಕೆ ಹೆಚ್ಚುವರಿ ಪಡಿತರ ನೀಡುತ್ತಿರುವ ಕುರಿತು ವಿಚಾರಿಸಿದರು ಮತ್ತು ಪಡಿತರ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು ಹಾಗೂ ಇಲ್ಲಿನ ಗೋದಾಮು ಇನ್ನಿತರ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು.
ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ತಿರಿ-ಮುಡಿ ನೀಡಿ ಗೌರವಿಸಲಾಯಿತು, ಹಾಗೇ ಆಡಳಿತ ಮಂಡಳಿಯ ಇನ್ನಿತರ ಸದಸ್ಯರು ಸೇರಿ ಸಚಿವೆಯನ್ನು ಸಂಘದ ವತಿಯಿಂದ ಗೌರವಿಸಿದರು. ಹಾಗೂ ಚಾಂತಾರು ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಾವರ ಭಾಗದ ಅನೇಕ ಸಮಸ್ಯೆ ಕುರಿತು ಸಾರ್ವಜನಿಕರಿಂದ ಸಚಿವೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಕೆ. ರಘುಪತಿ ಭಟ್, ವಿಧಾನ ಪರಿಷತ್ ಸದಸ್ಯರಾದ ಮುನಿರಾಜು ಗೌಡ ಪಿ.ಎಂ, ಜಿಲ್ಲಾ ಪ್ರಧಾನಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಮಂಡಲದ ಅಧ್ಯಕ್ಷರಾದ ವೀಣಾ ವಿ. ನಾಯ್ಕ್ , ಮಂಡಲದ ಪ್ರಭಾರಿ ಶ್ರೀಶ ನಾಯಕ್, ಜಿಲ್ಲಾ ಪದಾಧಿಕಾರಗಳು, ಮಂಡಲದ ಪದಾಧಿಕಾರಗಳು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷರಾದ ಇರ್ಮಾಡಿ ತಿಮ್ಮಪ್ಪ ಶೆಟ್ಟಿ, ಜ್ಞಾನ ವಸಂತ ಶೆಟ್ಟಿ