ಬ್ರಹ್ಮಾವರ :  ಉಡುಪಿ ಗ್ರಾಮಾಂತರ ಬಿಜೆಪಿಯಿಂದ ಸಚಿವೆ ಶೋಭಾ ಕರಂದ್ಲಾಜೆ ಗೆ ಅದ್ದೂರಿ ಸ್ವಾಗತ 

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು  ಶಾಸಕರ ನೇತೃತ್ವದಲ್ಲಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.  ಇವರ ಸಹಯೋಗದೊಂದಿಗೆ, ಚಂಡೆ-ಕೊಂಬು-ಕಹಳೆಯೊಂದಿಗೆ ಉಡುಪಿ ಗ್ರಾಮಾಂತರ ಬಿಜೆಪಿಯಿಂದ ಸ್ವಾಗತಿಸಲಾಯಿತು.

ಪಡಿತರಕ್ಕೆ ಬಂದ ಕೆಲವು ಮಹಿಳೆಯರೊಂದಿಗೆ ಕೇಂದ್ರ ಸರಕಾರ ಪ್ರತೀ ಕುಟುಂಬಕ್ಕೆ ಹೆಚ್ಚುವರಿ ಪಡಿತರ ನೀಡುತ್ತಿರುವ ಕುರಿತು ವಿಚಾರಿಸಿದರು ಮತ್ತು ಪಡಿತರ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು ಹಾಗೂ ಇಲ್ಲಿನ ಗೋದಾಮು ಇನ್ನಿತರ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು.

ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ತಿರಿ-ಮುಡಿ ನೀಡಿ ಗೌರವಿಸಲಾಯಿತು, ಹಾಗೇ ಆಡಳಿತ ಮಂಡಳಿಯ ಇನ್ನಿತರ ಸದಸ್ಯರು ಸೇರಿ ಸಚಿವೆಯನ್ನು ಸಂಘದ ವತಿಯಿಂದ ಗೌರವಿಸಿದರು. ಹಾಗೂ ಚಾಂತಾರು ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಾವರ ಭಾಗದ ಅನೇಕ ಸಮಸ್ಯೆ ಕುರಿತು ಸಾರ್ವಜನಿಕರಿಂದ ಸಚಿವೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಕೆ. ರಘುಪತಿ ಭಟ್, ವಿಧಾನ ಪರಿಷತ್ ಸದಸ್ಯರಾದ ಮುನಿರಾಜು ಗೌಡ ಪಿ.ಎಂ, ಜಿಲ್ಲಾ ಪ್ರಧಾನಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಮಂಡಲದ ಅಧ್ಯಕ್ಷರಾದ ವೀಣಾ ವಿ. ನಾಯ್ಕ್ , ಮಂಡಲದ ಪ್ರಭಾರಿ ಶ್ರೀಶ ನಾಯಕ್, ಜಿಲ್ಲಾ ಪದಾಧಿಕಾರಗಳು, ಮಂಡಲದ ಪದಾಧಿಕಾರಗಳು, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷರಾದ ಇರ್ಮಾಡಿ ತಿಮ್ಮಪ್ಪ ಶೆಟ್ಟಿ, ಜ್ಞಾನ ವಸಂತ ಶೆಟ್ಟಿ 

ಉಪಾಧ್ಯಕ್ಷರಾದ ವೆಂಕಟ್ರಾಯ ನಾಯಕ್ ಹಾಗೂ ನಿರ್ದೇಶಕರು, ಕಾರ್ಯ ನಿರ್ವಹಣಾಧಿಕಾರಿ ಸುಭಾಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಪಕ್ಷದ ಎಲ್ಲಾ ಹಿರಿಯರು, ಪ್ರಮುಖರು, ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply