ಹಿಂದೂಗಳು ನಮ್ಮವರು, ಗೋಹತ್ಯೆ ಮಾಡಬೇಡಿ: ಬದ್ರುದ್ದೀನ್ ಅಜ್ಮಲ್

ಗುವಾಹಟಿ: ಅಸ್ಸಾಂ ಲೋಕಸಭಾ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್, ಅವರು ಅಸ್ಸಾಂ ರಾಜ್ಯ ಜಮಿಯತ್ ಉಲಮಾ (ASJU) ನ ಅಧ್ಯಕ್ಷರಾಗಿದ್ದಾರೆ. ದಿಯೋಬಂದಿ ಸ್ಕೂಲ್ ಆಫ್ ಥಾಟ್‌ಗೆ ಸೇರಿದ ಇಸ್ಲಾಮಿಕ್ ವಿದ್ವಾಂಸರ ಪ್ರಮುಖ ಸಂಸ್ಥೆಗಳ ಉನ್ನತ ಸಂಸ್ಥೆಗಳು ಈ ವಾರದ ಈದ್-ಉಲ್-ಅಧಾ ಸಂದರ್ಭದಲ್ಲಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಗೋವುಗಳನ್ನು ಬಲಿ ನೀಡದಂತೆ ಅಸ್ಸಾಂನ ಮುಸ್ಲಿಮರಿಗೆ ತನ್ನ ಮನವಿಯನ್ನು ಮಾಡಿದ್ದಾರೆ.

ಆರ್‌ಎಸ್‌ ಎಸ್‌ ನ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೆಲವರು ಹಿಂದೂ ದೇಶ ಮಾಡಲು ಪ್ರಯತ್ನಿಸುವ ಮೂಲಕ ಹಿಂದೂಸ್ತಾನವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ಅವರ ಕನಸಿನಲ್ಲಿಯೂ ಹಿಂದೂ ದೇಶ ಆಗುವುದಿಲ್ಲ. ಅವರು ಈ ದೇಶದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಏಕತೆಯನ್ನು ಒಡೆಯಲು ಸಾಧ್ಯವಿಲ್ಲ. ಈದ್‌ನಲ್ಲಿ ಒಂದು ದಿನ ಗೋವುಗಳನ್ನು ಹತ್ಯೆ ಮಾಡಬಾರದು, ಬದಲಿಗೆ ನಾವು ಈದ್‌ ನ್ನು ಹಿಂದೂ ಭಾಯಿಗಳೊಂದಿಗೆ ಆಚರಿಸುತ್ತೇವೆ. ನಮ್ಮ ಪೂರ್ವಜರೆಲ್ಲರೂ ಹಿಂದೂಗಳು. ನಂತರದಲ್ಲಿ ಅವರು ಇಸ್ಲಾಂಗೆ ಬಂದರು ಏಕೆಂದರೆ ಅದು ವಿಶೇಷ ಗುಣಗಳನ್ನು ಹೊಂದಿರುವ ಧರ್ಮ. ಅದು ಇತರ ಧರ್ಮಗಳ ಭಾವನೆಗಳನ್ನು ಗೌರವಿಸುತ್ತದೆ ಎಂದು ಶ್ರೀ ಅಜ್ಮಲ್ ಸುದ್ದಿಗಾರರಿಗೆ ತಿಳಿಸಿದರು.

ಭಾನುವಾರದಂದು ಆಚರಿಸಲಾಗುವ ಈದ್-ಉಲ್-ಅಧಾ ದಿನದಂದು ‘ಕುರ್ಬಾನಿ’ ಅಥವಾ ತ್ಯಾಗ ಮಾಡುವುದು ಮುಸ್ಲಿಮರಿಗೆ ಅತ್ಯಗತ್ಯ ಕರ್ತವ್ಯವಾಗಿದೆ ಎಂದು ಈ ಹಿಂದೆ ಹೇಳಿಕೆಯಲ್ಲಿ ಶ್ರೀ ಅಜ್ಮಲ್ ಹೇಳಿದ್ದರು, ಅವರು ಧಾರ್ಮಿಕ ವಿಧಿ ಮತ್ತು ಸಂಪ್ರದಾಯಗಳಲ್ಲಿ ನೀಡಲಾಗುವ ಪ್ರಾಣಿಗಳನ್ನು ಬಲಿಕೊಡುತ್ತಾರೆ ಎಂದಿದ್ದಾರೆ.

ಭಾರತವು ವೈವಿಧ್ಯಮಯ ಸಮುದಾಯಗಳು, ಜನಾಂಗೀಯ ಗುಂಪುಗಳು ಮತ್ತು ಧರ್ಮಗಳ ಜನರ ದೇಶವಾಗಿದೆ. ಭಾರತದ ಹೆಚ್ಚಿನ ನಿವಾಸಿಗಳು ಸನಾತನ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ, ಹಸುವನ್ನು ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.

ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು ಮತ್ತು ಇತರ ಜಾತಿ ಧರ್ಮದವರು ವಾಸಿಸುವ ಯಾವುದೇ ಪ್ರದೇಶದಲ್ಲಿ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟವುದನ್ನು ನಿಷೇಧಿಸಿದೆ, ಇದನ್ನು ಕಳೆದ ವರ್ಷ ಅಂಗೀಕರಿಸಿದ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, 2021 ಅನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply