ಕೃಷಿ ತರಬೇತಿ ಕಾರ್ಯಾಗಾರ

ಉಡುಪಿ ನಗರಸಭಾ ಸದಸ್ಯರೂ ಆಗಿರುವ ಶ್ರೀಯುತ ವಿಜಯ ಕೊಡವೂರು ಇವರು ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹಾಗೂ ಸ್ವಉದ್ಯೋಗಕ್ಕೆ ಅನುಕೂಲವಾಗುವಂತೆ ದಿನಾಂಕ 26-11-2022ರಂದು ಕೊಡವೂರಿನ ಅಣ್ಣಪ್ಪ ಶೆಟ್ಟಿ ಜುಮಾದಿನಗರ ಮನೆಯಲ್ಲಿ ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಶರ್ಮ ( ಅಧ್ಯಕ್ಷರು ಉಡುಪಿ ಕೃಷಿಕ ಸಂಘ) ಹಾಗೂ ದಯಾನಂದ್ ಗಾಣಿಗ ಇವರು ಮಲ್ಲಿಗೆ ಬೆಳೆಯುವ ವಿಧಾನ ಮಾರುಕಟ್ಟೆಯ ಅವಕಾಶಗಳು ಆರ್ಥಿಕ ಸಹಾಯ ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 23 ಜನ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ತರಬೇತಿ ಕಾರ್ಯಕ್ರಮದ ನಂತರ ಪ್ರೇರಣೆಗೊಂಡ ಕೆಲವು ಮಹಿಳೆಯರು ತಾವೂ ಮಲ್ಲಿಗೆ ಬೆಳೆದು ಆ ಮೂಲಕ ಹೆಚ್ಚುವರಿ ಧನಾರ್ಜನೆ ಮಾಡುವುದಾಗಿ ಭರವಸೆಯಿಂದ ನುಡಿದರು. ಹೀಗೆಯೇ ಮುಂದಿನ ದಿನಗಳಲ್ಲಿ ವಿವಿಧ ಗ್ರಾಮಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸ್ಥಳೀಯ ಮಹಿಳೆಯರನ್ನು ಒಟ್ಟು ಸೇರಿಸಿ ಇತರರಿಗೂ ಮ್ಲಲಿಗೆ ಬೆಳೆಯ ಮಾಹಿತಿ ಹಾಗೂ ಬೆಳೆಯಲು ಅಗತ್ಯವಿರುವ ಪೂರಕ ತರಬೇತಿ ಹಾಗೂ ಸಸಿಗಳನ್ನು ವಿತರಿಸುವ ಬಗ್ಗೆ ಚಿಂತಿಸಲಾಯಿತು. ನೂತನವಾಗಿ ಸಸಿ ಪಡೆಯುವವರಿಗೆ ಸಂಘಸಂಸ್ಥೆಗಳ ಹಾಗೂ ದಾನಿಗಳ ಸಹಭಾಗಿತ್ವದಲ್ಲಿ ಕೊಡಿಸುವ ಬಗ್ಗೆಯೂ ಚಿಂತಿಸಲಾಯಿತು. ಇದಲ್ಲದೆ ಮುಂದಿನದಿನಗಳಲ್ಲಿ ರೈತರಿಗೆ ಸಾವಯವ ಕೃಷಿ ಮಾಹಿತಿಯನ್ನೂ ನೀಡಿ ರಾಸಾಯನಿಕ ಮುಕ್ತ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನೂ ನಡೆಸುವ ಬಗ್ಗೆ ಶ್ರೀ ವಿಜಯ ಕೊಡವೂರು ಅವರು ಮಾಹಿತಿನೀಡಿದರು.

ಈ ಸಂದರ್ಬದಲ್ಲಿ
ರಾಮಕೃಷ್ಣ ಶರ್ಮ ( ಅದ್ಯಕ್ಷರು ಉಡುಪಿ ಕೃಷಿಕ ಸಂಘ)
ಹಾಗೂ ದಯಾನಂದ ಗಾಣಿಗ ಕಾಮಧೇನು ನರ್ಸರಿ ಹಿರಿಯಡ್ಕ, ಮಹಿಳಾ ಸಮಿತಿ ಅಧ್ಯಕ್ಷರಾದ ಚಂದ್ರಾವತಿ, ಕೃಷಿ ಸಮಿತಿ ಕೊಡವೂರು ಪ್ರಮುಖರಾದ ಅರುಣ್, ತೋಮ ಪೂಜಾರಿ,ಸ್ಥಳೀಯ ಕೃಷಿಕರಾದ ನವೀನ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply