ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಗ್ರಹಣ ಶಾಂತಿ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗ್ರಹಣ ಶಾಂತಿ
ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ಗ್ರಹಣ ಶಾಂತಿಯು 25ನೆಯ ತಾರೀಕು ಅಮಾವಾಸ್ಯೆಯ ಮಂಗಳವಾರ ಸಂಜೆ ನೆರವೇರಲಿದೆ.

ಇದೇ ತಿಂಗಳ ತಾರೀಕು 25ರ ಅಮಾವಾಸ್ಯೆಯ ಮಂಗಳವಾರದಂದು ಸೂರ್ಯನಿಗೆ ಕೇತು ಗ್ರಹಣವು ಸ್ವಾತಿ ನಕ್ಷತ್ರದಲ್ಲಿ ಸಂಭವಿಸಲಿದೆ. ಈ ಗ್ರಸ್ತಾಪ್ತ ಸೂರ್ಯಗ್ರಹಣವು ಸ್ವಾತಿ, ಚಿತ್ರ, ವಿಶಾಖ ಆರಿದ್ರ ಶತಭಿಷಾ ನಕ್ಷತ್ರದವರಿಗೂ ತುಲಾ ಮೀನಾ ವೃಷ್ಟಿಕ ಕರ್ಕಾಟಕ ರಾಶಿಯವರಿಗೂ ಅನಿಷ್ಟದಾಯಕವಾಗಲಿದೆ.
ಸಾಯಂಕಾಲ 4 ಗಂಟೆ 52 ನಿಮಿಷಕ್ಕೆ ಸರಿಯಾಗಿ ಸ್ಪರ್ಶವಾಗಲಿದ್ದು 5:ಗಂಟೆ 51 ನಿಮಿಷಕ್ಕೆ ಮಧ್ಯಕಾಲವಾಗಲಿದೆ.
6:ಗಂಟೆ 31 ನಿಮಿಷಕ್ಕೆ ಸರಿಯಾಗಿ ಗ್ರಹಣ ಮೋಕ್ಷ ಕಾಣಲಿದೆ.
ಈ ಗ್ರಹಣವು ಗ್ರಾಸ್ತಸ್ತವಾಗಿ ಸಂಭವಿಸಲಿರುವುದರಿಂದ ಅಂದು ಭೋಜನ ನಿಶಿದ್ಧ.
ಕ್ಷೇತ್ರದಲ್ಲಿ ಸಂಪನ್ನಗೊಳ್ಳುವ ಗ್ರಹಣಶಾಂತಿಯಲ್ಲಿ ಅರಿಸ್ಟವಿರುವ ರಾಶಿ ನಕ್ಷತ್ರದವರು ಪಾಲ್ಗೊಳ್ಳಬಹುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

 
 
 
 
 
 
 
 
 
 
 

Leave a Reply