ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಿರಂತರ ದೀಪಾರಾಧನೆ ಸಹಿತ ರಂಗೋತ್ಸವ

ಉಡುಪಿ, ಅ. 22: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನ ದಲ್ಲಿ ವೇಮೂ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನಿರಂತರವಾಗಿ ದೀಪಾರಾಧನೆ ಸಹಿತ ರಂಗಪೂಜಾ ಮಹೋತ್ಸವ ನೆರವೇರುತ್ತಿದೆ.

ಅ. 23ರಂದು ಕಾಸರಗೋಡಿನ ದುರ್ಗಾ ನಾಟ್ಯಾಾಲಯದ ಕಲಾವಿದರಿಂದ ಕ್ಷೇತ್ರದ ಆವರಣದಲ್ಲಿ ಬೆಳಗ್ಗಿನಿಂದ ರಾತ್ರಿಯ ವರೆಗೆ ನೃತ್ಯ ಸಂಗೀತ ನೆರವೇರಲಿದೆ. ಅ. 24ರಂದು ನಡೆಯಲಿರುವ ಮಹಾನ್ ಯಾಗದ ಪ್ರಯುಕ್ತ ನಡೆಯಲಿರುವ ಅನ್ನಸಂತರ್ಪಣೆಗೆ ಹಸುರು ಹೊರೆಕಾಣಿಕೆ ನೀಡಲಿಚ್ಛಿಸುವವರು ಅ. 23ರ ಸಂಜೆಯ ಒಳಗೆ ನೀಡಲು ಅವಕಾಶವಿದೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.  

ಕೀರ್ತಿ, ಯಶಸ್ಸು, ಧನ ಪ್ರಾಾಪ್ತಿ: ಶರನ್ನವರಾತ್ರಿ ಪರ್ವಕಾಲದಲ್ಲಿ ಸಣ್ಣ ರಂಗಪೂಜೆಯು ದೀಪಾರಾಧನೆ ಸಹಿತ ಭಕ್ತರ ಸೇವಾರ್ಥವಾಗಿ ನೆರವೇರುತ್ತಿದ್ದು, ವಿಜಯದಶಮಿ ಪರ್ವಕಾಲದಲ್ಲಿ ದೊಡ್ಡ ರಂಗಪೂಜೆಯು ಬಲಿಉತ್ಸವ ದೊಂದಿಗೆ ನೆರವೇರುತ್ತದೆ. ಅದು ನವರಾತ್ರಿಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂಗಳ ಪ್ರಕ್ರಿಯೆ ಯಾಗಿದೆ.
ಅಂದು ದೊಡ್ಡ ರಂಗಪೂಜೆಯು ದೇವರ ದ್ವಾರ , ಧ್ವಜಸ್ತಂಭ ಮಂಟಪಾದಿ ಪರ‌್ಯಂತ ಮೇಲ್ಕಟ್ಟು, ಕೆಳಗೆ ಪ್ರಕ್ಷಾಳಿತವಾದ ಮರದ ಹಲಗೆಯ ಮೇಲೆ ಶುದ್ಧವಸ್ತ್ರ ಸುಪತ್ರದಲ್ಲಿ ಶುದ್ಧಾನ್ನ, ನಾಳಿಕೇರಖಂಡ, ಅಪೋಪ, ಗುಡ, ಘೃತ, ಕದಳೀ ಪಕ್ವ ಪೊಗಪುಷ್ಪ (ಕೇಪಳ ಹೂವು) ಪ್ರಮುಖ ತಾಂಬೂಲ ಪಾರ್ಶ್ವದ್ವಯದಲ್ಲಿ ಅನೇಕಾನೇಕ ದೀಪಗಳಿಂದ ಯುಕ್ತವಾಗಿ ಎದುರಿಗೆ ಪಂಚದೀಪವನ್ನು ಬೆಳಗಿಸಿ, ದೇವರ ಧ್ಯಾಾನವನ್ನು ಉಲಿಯಲಾಗುತ್ತದೆ. ದೇವಿಯ ಅಲಂಕಾರದಿಂದಿಗೆ ಆಕೆಯ ಮಹಿಮೆಯ ಗುಣಗಾನವನ್ನು ಮಾಡಲಾಗುತ್ತದೆ. 

ಭಕ್ತರು ತದೇಕಚಿತ್ತರಾಗಿ ಆಧ್ಯಾನವನ್ನು ಆಲಿಸಿ, ದೇವರಿಗೆ ಬಡಿಸಿದ ನೈವೇದ್ಯವನ್ನು ಪಂಚದೀಪದ ಮುಖೇನ ಕಂಡು ಸರ್ವಾಲಂಕಾರ ಭೂಷಿತಳಾದ ದೇವಿಯ ಬಿಂಬವನ್ನು ಮನ ತುಂಬಿಕೊಂಡು ಮನದಿಚ್ಛೆೆಯನ್ನು ನಿವೇದಿಸಿಕೊಳ್ಳುವುದಾಗಿದೆ. ಸಮಸ್ತ ದೇವತೆಗಳಿಗೆ ನೈವೇದ್ಯ ನೀಡುವ ಕ್ರಮವೇ ರಂಗಪೂಜೆ. ಸರ್ವಾಭೀಷ್ಟ ಸಿದ್ಧಿಿ, ಷೋಡಷಾದಿ ಸಂಸ್ಕಾಾರ, ಮೋಕ್ಷ, ಆರೋಗ್ಯಕ್ಕಾಾಗಿ ರಂಗಪೂಜೆಯನ್ನು ಸಮರ್ಪಿಸಬಹುದು. ಇದರಿಂದ ಸರ್ವ ಶಾಪ ಪರಿಹಾರವಾಗಿ ಕೀರ್ತಿ, ಯಶಸ್ಸು, ಧನ, ಸುಖ, ಪುತ್ರಾಾದಿ ಅಭಿವೃದ್ಧಿ ಲಭಿಸಲಿದೆ ಎನ್ನುತ್ತಾರೆ ಶ್ರೀ ರಮಾನಂದ ಗುರೂಜಿಯವರು.

 
ಶರನ್ನವರಾತ್ರಿ ಮಹೋತ್ಸವಕ್ಕೆ ಶಾಸಕ ಯಶ್‌ಪಾಲ್ ಎ. ಸುವರ್ಣ ಭೇಟಿ ನೀಡಿದರು. ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ಶಾಸಕರನ್ನು ಬರಮಾಡಿಕೊಂಡು ಶ್ರೀ ದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ಶಾಸಕರು, ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗುತ್ತಿರುವುದಲ್ಲದೆ, ಕ್ಷೇತ್ರದ ಕಾರಣಿಕತೆಯಿಂದ ದೂರದ ಭಕ್ತರೂ ಆಗಮಿಸುತ್ತಿದ್ದಾರೆ. ಉಡುಪಿಯ ಅಭಿವೃದ್ಧಿಗೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ಈ ಕ್ಷೇತ್ರ ಸಹಕಾರಿಯಾಗಿದೆ ಎಂದು ಅಭಿಪ್ರಾಾಯಪಟ್ಟರು. ಕ್ಷೇತ್ರದ ಆನಂದ ಬಾಯರಿ ಹಾಗೂ ಆಡಳತ ಮಂಡಳಿಯವರು, ಭಕ್ತರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply