ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ , ಉಡುಪಿ ದಸರಾ ಇದರ 8ನೇ ವರ್ಷದ ಗೋವಿಂದ ಕಲ್ಯಾಣ ಮಂಟಪ ಅಜ್ಜರಕಾಡು ಪ್ರತಿಷ್ಠಾಪನೆಗೊಂಡ ಶಾರದಾ ಮಾತೆಯ ಶೋಭಾ ಯಾತ್ರೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ಸೋಮವಾರ ನೆಡೆಯಿತು.
ಯುವ ಉದ್ಯಮಿ ಪಿ ಅಜೆಯ್ ಶೆಟ್ಟಿ, ಶೋಭಾ ಯಾತ್ರೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಶೋಭಾ ಯಾತ್ರೆಯಲ್ಲಿ ವಿವಿಧ ಕುಣಿತಾ ಭಜನಾ ಮಂಡಳಿಗಳು , ನಾಸಿಕ್ ಬ್ಯಾಂಡ್ , ಚಂಡೆವಾದನ, ಟ್ಯಾಬ್ಲೋ ಶಿವಾಜಿ ಮಹಾರಾಜ್, ಈಶ್ವರ ಪಾರ್ವತಿ, ತಟ್ಟೀರಾಯ, ಕೀಲುಕುದುರೆ, ವಿವಿಧ ವೇಷ ಭೂಷಣಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಶೋಭಾ ಯಾತ್ರೆಯು ಮಂಗಳವಾದ್ಯದೊಂದಿಗೆ ಗೋವಿಂದ ಕಲ್ಯಾಣ ಮಂಟಪದಿಂದ ಹೊರಟು ಜೋಡುರಸ್ತೆ, ಬಿಗ್ ಬಜಾರ್, ಕೆ ಎಮ್ ಮಾರ್ಗ, ತ್ರಿವೇಣಿ ಸರ್ಕಲ್ , ಸರ್ವಿಸ್ ಬಸ್ ಸ್ಟ್ಯಾಂಡ್ , ಕಿದಿಯೂರು ಹೋಟೆಲ್ ಸಿಟಿ ಬಸ್ ನಿಲ್ದಾಣದಿಂದ ಮುಂದೆ ಸಾಗಿ ಶ್ರೀ ಶಂಕರನಾರಾಯಣ ದೇವಳದ ಪದ್ಮ ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು. ಧಾರ್ಮಿಕ ಪೂಜಾ ವಿಧಾನಗಳನ್ನು ದಾಮೋಧರ ಭಟ್ ನೇತೃತ್ವದಲ್ಲಿ ಅರ್ಚಕ ವೃಂದದವರು ನೆಡೆಸಿ ಕೊಟ್ಟರು. ಅಂಡಾರು ದೇವಿಪ್ರಸಾದ್ ಶೆಟ್ಟಿ , ಪದ್ಮ ರತ್ನಾಕರ್ , ಲಕ್ಷ್ಮೀ ನಾರಾಯಣ ಮಟ್ಟು, ರಾಧಾಕೃಷ್ಣ ಮೆಂಡನ್, ತಾರಾ ಆಚಾರ್ಯ, ಸರೋಜಾ ರಾವ್, ವೀಣಾ ಶೆಟ್ಟಿ , ಉಜ್ವಲ್ ಕಿರಣ, ಸುರೇಶ ಶೇರಿಗಾರ್, ಹರೀಶ್ ಪುತ್ರನ್, ಸುಜಾತ, ಸತೀಶ್ ಕುಮಾರ್, ವೇದಾವತಿ ಶೆಟ್ಟಿ, ಶೋಭಾ ಶೆಟ್ಟಿ, ಜಯರಾಮ್ ದೇವಾಡಿಗ, ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು, ನೂರಾರು ಭಕ್ತರೂ ಉಪಸ್ಥಿತರಿದ್ದರು.