ಮುಖ್ಯ ಅತಿಥಿ ನಿಟ್ಟೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ ಗೋಪಾಲ್ ಮುಗೇರಾಯ ಮುಂಡ್ಕೊರ್ ಪದಗ್ರಹಣ ಸಮಾರಂಭದ ದೀಪ ಬೆಳಗಿಸಿ ನೂತನವಾಗಿ ಆಯ್ಕೆಗೊಂಡ ಯೋಗೀಶ್ ಚಂದ್ರಾಧಾರ್ ರವರಿಗೆ ಪ್ರತಿಜ್ಞಾ ವಿಧಿ ಭೋದಿಸಿ ಶುಭ ಹಾರೈಸಿದರು. ಮಣಿಪಾಲ ಎಂ ಐ ಟಿ ಅಸಿಸ್ಟೆಂಟ್ ಪ್ರೊಫೆಸರ್ ಹೆಚ್ ಕೆ ಸುಗಂಧಿನಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಯು ಕೆ ರಾಘವೇಂದ್ರ ರಾವ್ , ರಮೇಶ್ ರಾವ್, ನಾರಾಯಣ ಮೂರ್ತಿ, ದಿವಾಕರ್ ರಾವ್ , ಹಾಗೂ ಕಾರ್ಯ ಕ್ರಮಕ್ಕೆ ಸಹಕಾರ ನೀಡಿದ ಶಾಂತಾ ಎಲೆಕ್ಟ್ರಿಕಲ್ಸ್ ಮಾಲಕರಾದ ಶ್ರೀಪತಿ ಭಟ್ , ಶ್ರೀ ದೇವಿ ಗ್ಲಾಸ್ ಗೌಸ್ ಮಾಲಕರಾದ ಸುರೇಶ್ ನಾಯ್ಕ್ ಕಳೆದ ಸಾಲಿನ ಅಧ್ಯಕ್ಷರಾದ ಪಾಂಡುರಂಗ ಆಚಾರ್ಯರವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ ನ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ,ನೂತನ ಕಾರ್ಯದರ್ಶಿ ಮಹೇಶ್ ಕಾಮತ್ ನೂತನ ಖಂಚಾಚಿ ಅಮಿತ್ ಅರವಿಂದ್ ನಾಯಕ್ , ಡಾ ಶ್ರೀನಾಥ್ ಶೆಟ್ಟಿ , ಹರಿಪ್ರಸಾದ್ ಶೆಟ್ಟಿ , ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಪಾಂಡುರಂಗ ಆಚಾರ್ಯ ಸ್ವಾಗತಿಸಿದರು. ಭಗವಾನ್ ದಾಸ್ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕಾಮತ್ ವಂದಿಸಿದರು, ಉಡುಪಿ ಜಿಲ್ಲೆಯ ಕುಂದಾಪುರ , ಕಾರ್ಕಳ, ಮೂಲ್ಕಿ, ಬ್ರಹ್ಮಾವರ ವಲಯದ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಘದ ಸದಸ್ಯರಾದ ರಾಜೇಶ್ ಶೇಟ್, ದಯಾನಂದ್, ಶಂಕರ್ ರಸಮಂಜರಿ ಕಾರ್ಯಕ್ರಮ ನೆಡೆಸಿಕೊಟ್ಟರು