ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ ಆ್ಯಂಡ್ ಆರ್ಕಿಟೆಕ್ಟ್ (ಎಸಿಸಿಇಎ) ಉಡುಪಿ: ಪದಗ್ರಹಣ ಸಮಾರಂಭ

ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ ಆ್ಯಂಡ್ ಆರ್ಕಿಟೆಕ್ಟ್ (ಎಸಿಸಿಇಎ) ಉಡುಪಿ ಇದರ ನೂತನ ಅಧ್ಯಕ್ಷರ   ಪದಗ್ರಹಣ ಸಮಾರಂಭ  ಏ 6   ಶನಿವಾರ  ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್‌ನ 2ನೇ ಮಹಡಿಯ ಲ್ಲಿರುವ ಜ್ಸಿಹಾ  ಬ್ಯಾಂಕ್ವೆಟ್ ಹಾಲ್‌ನಲ್ಲಿ  ನೆಡೆಯಿತು. 

                                                                                                                             ಮುಖ್ಯ ಅತಿಥಿ ನಿಟ್ಟೆ ಶಿಕ್ಷಣ ಸಂಸ್ಥೆಯ  ಉಪಾಧ್ಯಕ್ಷ  ಡಾ ಗೋಪಾಲ್ ಮುಗೇರಾಯ ಮುಂಡ್ಕೊರ್ ಪದಗ್ರಹಣ ಸಮಾರಂಭದ ದೀಪ ಬೆಳಗಿಸಿ ನೂತನವಾಗಿ  ಆಯ್ಕೆಗೊಂಡ  ಯೋಗೀಶ್ ಚಂದ್ರಾಧಾರ್ ರವರಿಗೆ ಪ್ರತಿಜ್ಞಾ ವಿಧಿ ಭೋದಿಸಿ ಶುಭ ಹಾರೈಸಿದರು. ಮಣಿಪಾಲ ಎಂ ಐ ಟಿ  ಅಸಿಸ್ಟೆಂಟ್ ಪ್ರೊಫೆಸರ್ ಹೆಚ್ ಕೆ  ಸುಗಂಧಿನಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ  ಯು ಕೆ  ರಾಘವೇಂದ್ರ ರಾವ್ , ರಮೇಶ್ ರಾವ್, ನಾರಾಯಣ ಮೂರ್ತಿ, ದಿವಾಕರ್ ರಾವ್ , ಹಾಗೂ  ಕಾರ್ಯ ಕ್ರಮಕ್ಕೆ ಸಹಕಾರ ನೀಡಿದ  ಶಾಂತಾ ಎಲೆಕ್ಟ್ರಿಕಲ್ಸ್ ಮಾಲಕರಾದ ಶ್ರೀಪತಿ ಭಟ್ , ಶ್ರೀ ದೇವಿ ಗ್ಲಾಸ್ ಗೌಸ್ ಮಾಲಕರಾದ ಸುರೇಶ್ ನಾಯ್ಕ್  ಕಳೆದ ಸಾಲಿನ ಅಧ್ಯಕ್ಷರಾದ  ಪಾಂಡುರಂಗ ಆಚಾರ್ಯರವರನ್ನು ಈ   ಸಂದರ್ಭದಲ್ಲಿ  ಸಮ್ಮಾನಿಸಲಾಯಿತು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ ಆ್ಯಂಡ್ ಆರ್ಕಿಟೆಕ್ಟ್ ನ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ,   ,ನೂತನ  ಕಾರ್ಯದರ್ಶಿ ಮಹೇಶ್ ಕಾಮತ್  ನೂತನ ಖಂಚಾಚಿ  ಅಮಿತ್ ಅರವಿಂದ್ ನಾಯಕ್ , ಡಾ ಶ್ರೀನಾಥ್ ಶೆಟ್ಟಿ , ಹರಿಪ್ರಸಾದ್ ಶೆಟ್ಟಿ , ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು.

ಪಾಂಡುರಂಗ ಆಚಾರ್ಯ ಸ್ವಾಗತಿಸಿದರು. ಭಗವಾನ್ ದಾಸ್ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕಾಮತ್  ವಂದಿಸಿದರು,  ಉಡುಪಿ ಜಿಲ್ಲೆಯ  ಕುಂದಾಪುರ , ಕಾರ್ಕಳ, ಮೂಲ್ಕಿ, ಬ್ರಹ್ಮಾವರ ವಲಯದ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಘದ ಸದಸ್ಯರಾದ  ರಾಜೇಶ್ ಶೇಟ್, ದಯಾನಂದ್, ಶಂಕರ್ ರಸಮಂಜರಿ ಕಾರ್ಯಕ್ರಮ ನೆಡೆಸಿಕೊಟ್ಟರು 

 
 
 
 
 
 
 
 
 
 
 

Leave a Reply