ನೈತಿಕ ಮೌಲ್ಯಗಳಿಂದ ಶಿಕ್ಷಣ ಪರಿಪೂರ್ಣ – ಡಾ.ಮಧುಸೂದನ ಭಟ್

ಪದವಿಧರರೆಲ್ಲಾ ಸುಶಿಕ್ಷಿತರಲ್ಲ, ಸುಶಿಕ್ಷಿತರಾಗಲು ಪದವಿಯೂ ಬೇಕಾಗಿಲ್ಲ. ಪದವಿಗಳೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುವುದಾಗಿ ನಿವೃತ್ತ ಪ್ರಾಚಾರ್ಯರಾದ ಡಾ.ಮಧುಸೂದನ ಭಟ್ ಹೇಳಿದ್ದಾರೆ.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ನವೆಂಬರ್ 23 ರಂದು ಹಮ್ಮಿಕೊಂಡ ನೈತಿಕ ಮೌಲ್ಯಗಳು ಹಾಗೂ ಶಿಕ್ಷಣ ಎಂಬ ವಿಚಾರದ ಮೇಲೆ ವಿಶೇಷ ಉಪನ್ಯಾಸ ನೀಡುತ್ತಿದ್ದರು.

ಬದುಕಿನ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳಾದ ತಂದೆ-ತಾಯಿ ಗುರುಗಳು ಹಾಗೂ ಅತಿಥಿಗಳ ಸೇವೆಯನ್ನು ಸದಾ ಸ್ಮರಿಸುವು ದರಿಂದ ಅವರ ಅನುಗ್ರಹದ ಜೊತೆಗೆ ಬಾಳು ಹಸನಾಗುವುದು ಎಂಬುದನ್ನು ನಾನಾ ಕತೆಗಳನ್ನು ಉಲ್ಲೇಖಿಸಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ಇವರು ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ರಾಜೇಶ್ ಕುಮಾರ್ ಸ್ವಾಗತಿಸಿದರು, ಸಹಯೋಜನಾಧಿಕಾರಿ ಚಂದ್ರಶೇಖರ್ ವಂದಿಸಿದರು.

 
 
 
 
 
 
 
 
 
 
 

Leave a Reply