ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜ್ ಕುಂಜಿಬೆಟ್ಟು, ಉಡುಪಿ ಇವರ ಸಹಯೋಗದೊಂದಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ) ಉಡುಪಿಯ ವತಿಯಿಂದ ‘ಮಾನಸಿಕ ಸಮಸ್ಯೆ’ ಯ ಕುರಿತಾದ ಬೀದಿನಾಟಕ ಪ್ರದರ್ಶನದ ಉದ್ಘಾಟನೆಯು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರದಂದು ಉದ್ಘಾಟಿಸಲ್ಪಟ್ಟಿತು.
ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊಫೆಸರ್ ಭಾಸ್ಕರ್ ಶೆಟ್ಟಿ ರಂಗಗೀತೆಯನ್ನು ಟ್ಯೂನ್ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ಬೀದಿನಾಟಕದ ಪಾತ್ರಧಾರಿಗಳಾಗಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಥಮ ಹಾಗು ದ್ವಿತೀಯ ಬಿ.ಕಾಂ, ಬಿಬಿಎ ಯ ಎಂಟು ವಿದ್ಯಾರ್ಥಿಗಳು ಭಾಗವಹಿಸಿ ಉಡುಪಿಯ ವಿವಿಧೆಡೆ ಪ್ರದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ಶ್ರೀ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊಫೆಸರ್ ಶಂಕರ್, ಸಂಚಾಲಕ ರವಿರಾಜ್ ಹೆಚ್.ಪಿ, ರೋಟರಿ ಉಡುಪಿ ಇದರ ಅಧ್ಯಕ್ಷ ಶ್ರೀಮತಿ ರಾಧಿಕಾ ಲಕ್ಷ್ಮಿನಾರಾಯಣ್, ಯು.ಪಿ.ಎಂ.ಸಿಯ ಪ್ರಾಚಾರ್ಯ ಡಾ. ಮಧುಸೂದನ್ ಭಟ್, ಬೀದಿನಾಟಕದ ಸಂಯೋಜಕ, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ, ಬೀದಿನಾಟಕದ ನಿರ್ದೇಶಕ ಪ್ರಮೋದ್ ಶೆಟ್ಟಿ ಅತ್ರಾಡಿ ಮತ್ತಿತರರು ಉಪಸ್ಥಿತರಿದ್ದರು.