ತರಬೇತಿ ಕಾರ್ಯಾಗಾರ

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ದ್ವಿತೀಯ ಪದವಿ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು.
ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ನೇತೃತ್ವದಲ್ಲಿ,  ಹಳೆವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಕೆರಿಯರ್ ಗೈಡನ್ಸ್ ಮತ್ತು ಸ್ಟೂಡೆಂಟ್ ಟ್ರೈನಿಂಗ್ ವಿಭಾಗದ ಆಶ್ರಯದಲ್ಲಿ “The New Me- Rediscovering Our Abilities ” ಎಂಬ ವಿಷಯದ ಮೇಲೆ  ಒಂದು ದಿನದ ತರಬೇತಿ ಕಾರ್ಯಾಗಾರವನ್ನು  ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು . ಇದರಲ್ಲಿ ಕಾಲೇಜಿನ 286 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀ ಪ್ರವೀಣ್ ಗುಡಿ, ಹುಬ್ಬಳ್ಳಿ, ನಿರ್ದೇಶಕರು, My Life ಇವರು ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ  ಡಾ.ರಾಘವೇಂದ್ರ ಎ ಅಧ್ಯಕ್ಷತೆ ವಹಿಸಿ ಹಿತನುಡಿದರು. ಹಳೆವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿಗಳು ಸಕ್ರಿಯ ಸದಸ್ಯರೂ ಆದ ಶ್ರೀಮುರಳಿ ಕಡೆಕಾರ್,  ಶ್ರೀಮತಿ ಜಯಲಕ್ಷ್ಮಿ, ಡಾ|  ಆನಂದ ಆಚಾರ್ಯರು ಉಪಸ್ಥಿತರಿದ್ದರು.   ವಿದ್ಯಾರ್ಥಿನಿ ಕು.ಅನುಷಾ ಸಿ ಎಚ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿ, ಧನ್ಯವಾದವಿತ್ತರು
 
 
 
 
 
 
 
 
 
 
 

Leave a Reply