ಶಿಕ್ಷಣ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್ ತರಗತಿಗಳಿಗೆ ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿ- ಶಿಕ್ಷಕರಿಗಾಗಿ ಒಂದು ದಿನದ ಅಭಿವಿನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಮತಿಯರಾದ ಪ್ರೀತಿ ಎಸ್ ರಾವ್ ,ಧನಲಕ್ಷ್ಮೀ, ರೂಪಾ.ಕೆ, ಮಮತಾ ಸಾಮಂತ್ ಮತ್ತು ಶ್ರೀ ವಿಜಯಕುಮಾರ್ ಪಠ್ಯಕ್ರಮ, ಬಾಹ್ಯಮತ್ತು ಆಂತರಿಕ ಮೌಲ್ಯಮಾಪನ, ಸಹಪಠ್ಯ ಚಟುವಟಿಕೆಗಳು, ಗ್ರಂಥಾಲಯ ಸೇವೆ ಮತ್ತು ಕಾಲೇಜಿನ ಆವರಣ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಒದಗಿಸಿದರು.

 

ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಸರ್ವರನ್ನೂ ಸ್ವಾಗತಿಸಿ ಕಾಲೇಜಿನ ಭವ್ಯ ಇತಿಹಾಸ, ಆಡಳಿತಮಂಡಳಿ, ಲಭ್ಯ ಭೌತಿಕ ಹಾಗೂ ಬೌಧ್ಧಿಕ ಸೌಲಭ್ಯಗಳನ್ನು ಕುರಿತು ಮಾತನಾಡಿ ಬದುಕು ಮತ್ತು ಪರಿಣಾಮಕಾರಿ ಅಧ್ಯಯನಕ್ಕೆ ಅಗತ್ಯವಾದ ಧನಾತ್ಮಕ ಚಿಂತನೆ ರೂಢಿಸಿಕೊಳ್ಳುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ದಿ ಟಿಎಂಎ ಪೈ ಯವರ ಜೀವನ- ಸಾಧನೆಯನ್ನು ಕುರಿತು ಎರಡು ಕಿರು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.

 
 
 
 
 
 
 
 
 
 
 

Leave a Reply