ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ರೋಟರಿ ಕ್ಲಬ್, ಮಣಿಪಾಲ , ಮಣಿಪಾಲ ಮಹಿಳಾ ಸಮಾಜ ಇವರ ಆಶ್ರಯದಲ್ಲಿ ಜುಲೈ 2 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 11:30 ರವರೆಗೆ ಪ್ರಸಿದ್ಧ ಕಲಾವಿದರು ಹಾಗೂ ಮನೋವೈದ್ಯರಾದ ಶಿವಮೊಗ್ಗದ ಪವಿತ್ರ ಕೆ.ಎಸ್ ಅವರಿಂದ ಕನ್ನಡದ ಪ್ರಸಿದ್ಧ ಕವಯಾತ್ರಿಯರಾದ ಅಕ್ಕಮಹಾದೇವಿ ,ವೈದೇಹಿ, ಕಮಲಾ ಹಂಪನ, ಪ್ರತಿಭಾ ನಂದಕುಮಾರ್ ಮುಂತಾದ ಮಹಿಳಾ ಕವಯತ್ರಿಯರ ಕಾವ್ಯದ ನೃತ್ಯ ಅಭಿವ್ಯಕ್ತಿ , ‘ಕಾವ್ಯ ಕನ್ನಿಕಾ ‘ ಕಾರ್ಯಕ್ರಮವು ಬುಡ್ನಾರಿನ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ರವಿರಾಜ್ ಎಚ್.ಪಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.