ಸದಾ ತಪೋನಿರತರಾದ ಅಷ್ಟ ಮಠದ ಯತಿಗಳಿಂದ ನಿರಂತರ ಪೂಜೆಯನ್ನು ಕೈಗೊಳ್ಳುತ್ತಿರುವ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಹಾಗೂ ಪರಮಪೂಜ್ಯ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದಿಂದ ತಾ. 17-03-2024ನೇ ಆದಿತ್ಯವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.), ಉಡುಪಿ ಇದರ ರಜತ ಮಹೋತ್ಸವದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಚಿಕಿತ್ಸೆ ಮತ್ತು ರಕ್ತದಾನ ಶಿಬಿರವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.
ಈ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಮಹೇಶ್ ಆಸ್ಪತ್ರೆ, ಬ್ರಹ್ಮಾವರ, ಜಿಲ್ಲಾಸ್ಪತ್ರೆ, ಉಡುಪಿ, ಎ.ಜೆ.ಆಸ್ಪತ್ರೆ, ದಂತ ಚಿಕಿತ್ಸಾ ವಿಭಾಗ-ಮಂಗಳೂರು, ಗಾಂಧಿ ಹಾಸ್ಪಿಟಲ್, ಉಡುಪಿ, ಎಕ್ಸಲೆಂಟ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್, ಕಡಿಯಾಳಿ- ಉಡುಪಿ, ಶ್ರೀಹರಿ ನೇತ್ರಾಲಯ, ಅಂಬಲಪಾಡಿ, ಅನಾಮಯ ಕ್ಲಿನಿಕ್, ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆ, ಉಡುಪಿ ಇವರ ಸಹಯೋಗದೊಂದಿಗೆ ನಡೆಯಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಎಂ. ಮಂಜುನಾಥ ಉಪಾಧ್ಯಾಯ ಅಧ್ಯಕ್ಷರು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.), ಶ್ರೀ ಶ್ರೀಕಾಂತ ಉಪಾಧ್ಯಾಯ ಸಂಚಾಲಕರು ರಜತ ಮಹೋತ್ಸವ ಸಮಿತಿ, ಶ್ರೀ ಜಯರಾಮ ಆಚಾರ್ಯಕಾರ್ಯದರ್ಶಿ ರಜತ ಮಹೋತ್ಸವ ಸಮಿತಿ, ಶ್ರೀ ಜನಾರ್ದನ ಭಟ್ ರಜತ ಮಹೋತ್ಸವ ಸಮಿತಿ, ಶ್ರೀ ಎಂ. ಶ್ರೀನಿವಾಸ ಬಲ್ಲಾಳ ಅಧ್ಯಕ್ಷರು ರಜತ ಮಹೋತ್ಸವ ಸಮಿತಿ, ಶ್ರೀ ಶ್ರೀನಿವಾಸ ಯು.ಬಿ.. ಕಾರ್ಯದರ್ಶಿ ಉಪಸ್ಥಿತರಿದ್ದರು