ಎಸ್ ಕೆಪಿಎ ಆಯೋಜಿಸುವ ಜಿಲ್ಲಾ ಕೆಸರು ಗದ್ದೆ ಕ್ರೀಡಾಕೂಟದ ಪೂರ್ವಭಾವಿ ತಯಾರಿ ಸಭೆ 

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ ಹಾಗು ಉಡುಪಿ ಜಿಲ್ಲೆ ವತಿಯಿಂದ ಆಗಸ್ಟ್ 13 ರಂದು, ಕಟಪಾಡಿಯಲ್ಲಿ ನಡೆಯುವ ಜಿಲ್ಲಾ ಕೆಸರು ಗದ್ದೆ ಕ್ರೀಡಾಕೂಟದ ಪೂರ್ವಭಾವಿ ತಯಾರಿ ಸಭೆ ಶನಿವಾರದಂದು {08.07.2023} ಕೇಂದ್ರ ಸಮಿತಿ ಪದಾಧಿಕಾರಿಗಳು ಹಾಗು ಉಡುಪಿ ವಲಯದ ಸಮಿತಿ ಸದಸ್ಯರೊಂದಿಗೆ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆಯಿತು. 
ಜಿಲ್ಲಾಧ್ಯಕ್ಷ ಆನಂದ್ ಎನ್ ಕುಂಪಲ ಹಾಗು ಕ್ರೀಡಾ ಕಾರ್ಯದರ್ಶಿಗಳಾದ ಶ್ರೀನಿವಾಸ ಐತಾಳ್ ಹಾಗು ರಾಜೇಶ್ ತೊಕ್ಕೊಟ್ಟು ಕ್ರೀಡಾ ಕೂಟದ ಬಗ್ಗೆ  ಸವಿವರವಾದ ಮಾಹಿತಿಯನ್ನು ನೀಡಿ ಉಡುಪಿ ವಲಯದಿಂದ ಸರ್ವ ಸಹಕಾರವನ್ನು ಬಯಸಿದರು. ಜಿಲ್ಲಾ ಸಮಿತಿಯಿಂದ ಧನಾತ್ಮಕ ಬೆಂಬಲದ ಘೋಷಣೆ ಮಾಡಿದರು. ಜಿಲ್ಲಾಧ್ಯಕ್ಷರು ತಮ್ಮ ವಯಕ್ತಿಕ ನೆಲೆಯಲ್ಲಿ ರೂ . ೧೦,೦೦೦-೦೦ ನೀಡುವದಾಗಿ ಭರವಸೆ ನೀಡಿದರು. 
ಕ್ರೀಡಾಕೂಟ ಸಂಯೋಜನೆ ಯಶಸ್ವಿಯಾಗಿ ನೆರವೇರಿಸಲು ಉಡುಪಿ ವಲಯದ ಪದಾಧಿಕಾರಿಗಳ ಒಂದು ಸಮಿತಿಯನ್ನು ಮಾಡಲಾಯಿತು. ಸುರಭಿ ಸುಧೀರ್ ಶೆಟ್ಟಿಯವರ ಸಂಚಾಲಕತ್ವ, ಹಾಗು ಸಹ ಸಂಚಾಲಕರಾಗಿ ಕೆ.ವಾಸುದೇವ ರಾವ್, ಅನಿಶ್ ಶೆಟ್ಟಿಗಾರ್, ಹರೀಶ್ ಕೆಮ್ಮಣ್ಣು, ಪ್ರಕಾಶ್ ಕೊಡಂಕೂರು, ಸುಕೇಶ್ ಕೆ ಅಮೀನ್, ನವೀನ ಬಲ್ಲಾಳ್, ಪ್ರವೀಣ್ ಕೊರೆಯ, ನಾರಾಯಣ ಜತ್ತನ್, ಎಂ. ಎಸ್. ಮಂಜು, ಸತೀಶ ಸೇರಿಗಾರ್,  ಹಾಗು ಸಂತೋಷ್ ಕೊರಂಗ್ರಪಾಡಿಯವರನ್ನು ನೇಮಿಸಲಾಯಿತು. 
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜೊತೆ ಕಾರ್ಯದರ್ಶಿ ಅಜಯ್ ಕುಮಾರ್,  ವಾಮನ ಪಡುಕರೆ, ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕಟೀಲ್, ಸಂಘಟನಾ ಕಾರ್ಯದರ್ಶಿ ಹೆರಿಕ್ ಡಿಸೋಜ, ನವೀನ ಚಂದ್ರ ಮೂಲ್ಕಿ, ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ಸುಂದರ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್   ಕೊರೆಯ ಪ್ರಸ್ತಾಪಿಸಿದರು. ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ ವಂದಿಸಿದರು.
 
 
 
 
 
 
 
 
 
 
 

Leave a Reply