ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮ

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮದ ಅಂಗವಾಗಿ ನಿನ್ನೆ ಸಂಜೆ ಕೋಟ ಮಣೂರಿನ ಶಿವಾನಂದ ಅಡಿಗಳನ್ನು ಗೌರವಿಸಲಾಯಿತು, ಕೃಷಿ ಕ್ಷೇತ್ರ ಹಾಗೂ ಸಮಾಜ ಸೇವೆಯಲ್ಲಿ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರಾದ ಸಚ್ಚಿದಾನಂದ ಅಡಿಗ ವಡ್ಡರ್ಸೆ ಹಾಗೂ ಕೇರಳದ ಕೊಲ್ಲಂ ನ ಅಮ್ಮ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್ ಅಡಿಗಳು ಉಪಸ್ಥಿತರಿದ್ದರು, ಶ್ರೀ ಶಾಂತಿಮತೀ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಪ್ರಸನ್ನ ಭಟ್ ಸ್ವಾಗತಿಸಿ ವಿದ್ವಾನ್ ಡಾ.ವಿಜಯ್ ಕುಮಾರ್ ಮಂಜರ್ ಪ್ರಾಸ್ತಾವಿಕ ಮಾತನಾಡಿದರು ಅಧ್ಯಕ್ಷರಾದ ಸಚ್ಚಿದಾನಂದ ಅಡಿಗ ವಡ್ಡರ್ಸೆ ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು, ಶಾಂತಿಮತೀ ಪ್ರತಿಷ್ಠಾನ ದ ಮಾಜಿ ಅಧ್ಯಕ್ಷ ಉಮೇಶ್ ಬಾಯರಿ, ದಯಾನಂದ ವಾರಂಬಳ್ಳಿ, ಹಾಗೂ ಶಾಂತಿಮತೀ ಪ್ರತಿಷ್ಠಾನ ದ ಸದಸ್ಯರು ಹಾಗೂ ಶ್ರೀಯುತರ ಹಿತೈಷಿಗಳು ಭಾಗವಹಿಸಿದ್ದರು,ಶಾಂತಿಮತೀ ಪ್ರತಿಷ್ಠಾನ ದ ಕೋಟಿ ಗಾಯತ್ರಿ ಜಪ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಪಾರಾಯಣ ಅಭಿಯಾನ ದ ಅಂಗವಾಗಿ ವಿಪ್ರ ಬಂಧುಭಗಿನಿಯರಿಂದ ಎರಡು ಬಾರಿ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಗಾಯತ್ರಿ ಜಪ ನಡೆಯಿತು.

 
 
 
 
 
 
 
 
 
 
 

Leave a Reply