ಸೈಬ್ರಕಟ್ಟೆ ರೋಟರಿಯಿಂದ ಅಂಗಸಂಸ್ಥೆ ರೋಟರಿ ಸಮುದಾಯ ದಳಗಳ ಪದಪ್ರದಾನ ಕಾರ್ಯಕ್ರಮ

ಬ್ರಹ್ಮಾವರ : ಸೈಬ್ರಕಟ್ಟೆ ರೋಟರಿಯಿಂದ ಅಂಗಸಂಸ್ಥೆ ರೋಟರಿ ಸಮುದಾಯ ದಳಗಳ ಪದಪ್ರದಾನ ಕಾರ್ಯಕ್ರಮ ರೋಟರಿ ಭವನದಲ್ಲಿ ನಡೆಯಿತು.

ಸೈಬ್ರಕಟ್ಟೆ ಯಡ್ತಾಡಿ ಭಾಗದ ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅವರಿಗೆ ಕೊರಳ ಲಾಂಚನ ತೊಡಿಸಿ ರೋಟರಿ 3182 ಜಿಲ್ಲಾ ಉಪಸಭಾಪತಿ ಜಗನ್ನಾಥ್ ಕೋಟೆ ಪದಪ್ರದಾನಗೈದರು.

ಕಾರ್ಯದರ್ಶಿಯಾಗಿ ರಾಘವೇಂದ್ರ ಶೆಟ್ಟಿ ಕಲ್ಬೆಟ್ಟು ಆಯ್ಕೆಯಾದರು  ಮಾತನಾಡಿದ ಕೋಟೆ ಯವರು ರೋಟರಿ ಸಮುದಾಯ ದಳ ಅನ್ನೋದು 18 ವರ್ಷ ಮೇಲ್ಪಟ್ಟವರು ಸದಸ್ಯರಾಗಬಹುದು. ಸಮುದಾಯದಲ್ಲಿ ರೋಟರಿ ಜೊತೆ ಗೂಡಿ ಹಲವು ಸೇವಾ ಕಾರ್ಯಕ್ರಮ ಹಮ್ಮಿಕೊಂಡು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿ ಎಂಬ ಸಂದೇಶ ನೀಡಿದರು.

ಸೈಬ್ರಕಟ್ಟೆ ಶಿರಿಯಾರ ಭಾಗದ ರೋಟರಿ ಸಮುದಾಯ ದಳವನ್ನು ವಲಯ ಸಂಯೋಜಕ ಶಂಕರ್ ಸುವರ್ಣ ಅಧ್ಯಕ್ಷ ಶರತ್ ಕೆ. ಗೆ ಕೊರಳ ಲಾಂಚನ ತೊಡಿಸಿ ಪದಪ್ರದಾನ ನೆರವೇರಿಸಿದರು.ಕಾರ್ಯದರ್ಶಿಯಾಗಿ ಶರತ್ ಡಿ ಆಯ್ಕೆ ಗೊಂಡರು,ಅಲ್ಲದೆ ಸಮುದಾಯ ದಳಗಳ ಕಾರ್ಯ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಿದರು.

ಸೈಬ್ರಕಟ್ಟೆ ರೋಟರಿ ಕ್ಲಬ್ ನ ಇಂಜಿನಿಯರ್ ಸದಸ್ಯರುಗಳಾದ ಸಂದೀಪ್ ಶೆಟ್ಟಿ ಥೋಮಸ್ ವಾಝ್ ,ರತ್ನಾಕರ್ ಹೆಗ್ಡೆ ವಿಜಯ್ ಕುಮಾರ್ ಶೆಟ್ಟಿ ಕೆ.ಯು ಪ್ರಸಾದ್ ಭಟ್ ರನ್ನು ಇಂಜಿನಿಯರ್ಸ್ ಡೇ ಆಚರಣೆ ಪ್ರಯುಕ್ತ RCC ಮತ್ತು ರೋಟರಿ ಜಂಟಿಯಾಗಿ ಆಯೋಜಿಸಿ ಮುಖ್ಯ ಅತಿಥಿ ರೋಟರಿ ವಲಯ 3 ರ ಸಹಾಯಕ ಗವರ್ನರ್ ಕೆ ಪದ್ಮನಾಭ್ ಕಾಂಚನ್ ಸನ್ಮಾನಿಸಿದರು. ಬಳಿಕ ಮಾತನಾಡಿ ಎಂಜಿನಿಯರ್ಗಳು  ಉತ್ತಮ ಟೆಕ್ನಾಲಜಿ ಮೂಲಕ  ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.

ರೋಟರಿ ಅಧ್ಯಕ್ಷ ಯು.ಪ್ರಸಾದ್ ಭಟ್, ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ ಯಡ್ತಾಡಿ ಪಂಚಾಯತ್ ಸದಸ್ಯ ಅಮೃತ ಪೂಜಾರಿ ,ರೋಟರಿ ಕಾರ್ಯದರ್ಶಿ ಅಣ್ಣಯ್ಯದಾಸ್, ನಿರೂಪಕ ವರದರಾಜ್ ಶೆಟ್ಟಿ ರೋಟರಿ ಸದಸ್ಯರು ಭಾಗಿಯಾಗಿದ್ದರು.

 
 
 
 
 
 
 
 
 
 
 

Leave a Reply