ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತ ಸಮಾಪ್ತಿ ಅಂಗವಾಗಿ ಧರ್ಮಸಭೆ

ಬೆಂಗಳೂರು : ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 34 ನೇ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿ ನಾಗರಿಕರ ಪರವಾಗಿ ಗುರುವಂದನೆ ಸಮರ್ಪಿಸಿ ಶುಭ ಸಂದೇಶ ನೀಡಿದರು.

ಸಚಿವರುಗಳಾದ ಮುರುಗೇಶ ನಿರಾಣಿ, ಬಿ ಸಿ  ನಾಗೇಶ್, ವಿ ಸುನಿಲ್ ಕುಮಾರ್, ಶಾಸಕರಾದ ಎಚ್ ಕೆ ಪಾಟೀಲ್ ಕೆ ರಘುಪತಿ ಭಟ್, ರವಿ ಸುಬ್ರಹ್ಮಣ್ಯ, ಮಾಜಿ ಶಾಸಕ ಉದ್ಯಮಿ ಟಿ ಎ ಶರವಣ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ನಡೆದ ಗೋವಿನ ತುಲಾಭಾರದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು ಗೋವಿನೊಂದಿಗೆ ಕೆಲಹೊತ್ತು ಪ್ರೀತಿಯಿಂದ ಮೈದಡವಿ ಧನ್ಯತೆ ಅನುಭವಿಸಿದ್ದು ವಿಶೇಷವಾಗಿತ್ತು .

 
 
 
 
 
 
 
 
 
 
 

Leave a Reply