ರೋಟರಿ ಕ್ಲಬ್ ಮಣಿಪಾಲದ ವತಿಯಿಂದ ವನಮಹೋತ್ಸವ ಮಾಹಿತಿ ಕಾರ್ಯಕ್ರಮ

ಉಡುಪಿ : ರೋಟರಿ ಕ್ಲಬ್ ಮಣಿಪಾಲದ ವತಿಯಿಂದ ವನಮಹೋತ್ಸವ ಮತ್ತು ಮಾಹಿತಿ ಕಾರ್ಯಕ್ರಮ ಆ.3ರಂದು ಕುದಿ ವಿಷ್ಣುಮೂರ್ತಿ ಪ್ರೌಢಡ ಶಾಲಾ ವಠಾರದಲ್ಲಿ ನಡೆಯಿತು.

ರೋಟರಿ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಬಿಡುವಿನ ವೇಳೆಯ ಸದ್ಬಳಕೆ ಕುರಿತು ಮಾಹಿತಿ ನೀಡಿದರು.ರಾಜವರ್ಮ ಅಡಿಗ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.

ಶಾಲೆಯ ಪರಿಸರದಲ್ಲಿ ಹಣ್ಣಿನ ಸಸ್ಯಗಳನ್ನು ನೆಡಲಾಯಿತು.ಶಾಲೆಯ ಮುಖ್ಯ ಶಿಕ್ಷಕ ಎಸ್.ಜಾಧವ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ರೋಟರಿ ಕಾಯ೯ದಶಿ೯ ಅಬ್ದುಲ್ ರೆಹಮಾನ್, ಸದಸ್ಯರಾದ ಕರುಣಾಕರ ಶೆಟ್ಟಿ,ರತ್ನಾಕರ, ರವಿರಾಜ್ ಹೆಚ್.ಪಿ,ಮುಂತಾದವರು ಉಪಸ್ಥಿತರಿದ್ದರು.ರೋಟರಿ ಅಧ್ಯಕ್ಷರು ಶಾಲಾ ಲೈಬ್ರರಿ ಗೆ ಪುಸ್ತಕಗಳನ್ನು ನೀಡಿದರು.

 
 
 
 
 
 
 
 
 
 
 

Leave a Reply