ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಪ್ರಥಮ ಪ್ರಾಶಸ್ತ್ಯ ~ರೋ. ದಿವಾಕರ್

ಸೇವೆಯೇ ರೋಟರಿ ಸಂಸ್ಥೆಯ ಮೂಲ ಧ್ಯೇಯ. ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಾ ಸಮಾಜದ ಏಳಿಗೆಗಾಗಿ ದುಡಿಯುತ್ತೇವೆ ಎಂದು ಕಲ್ಯಾಣಪುರ ರೋಟರಿ ಕ್ಲಬ್ಬಿನ ನೂತನ ಅಧ್ಯಕ್ಷ ರೋ. ದಿವಾಕರ್ ಹೇಳಿದರು.

ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆದ ಕಲ್ಯಾಣಪುರ ರೋಟರಿ ಕ್ಲಬ್ಬಿನ ನೂತನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

2025-26ನೇ ಸಾಲಿಗೆ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ರೋ. ಪಿ.ಎಚ್.ಎಫ್ ಪಾಲಾಕ್ಷ ಪದಪ್ರಧಾನ ಅಧಿಕಾರಿಯಾಗಿ ಆಗಮಿಸಿ ಸಮಾಜ ಸೇವೆ ಯಲ್ಲಿ ರೋಟರಿ ಕಲ್ಯಾಣ ಪುರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು . ಅಸಿಸ್ಟೆಂಟ್ ಗವರ್ನರ್ ರೋ. ಪಿ.ಎಚ್.ಎಫ್ ಅಲ್ವಿನ್ ಸಿಲ್ವೆಸ್ಟರ್ ಕಾಡ್ರಾಸ್, ರವರು ಕಲ್ಯಾಣ ಜ್ಯೋತಿ ರೋಟರಿ ಸಂಚಿಕೆ ಯನ್ನು ಬಿಡುಗಡೆ ಗೊಳಿಸಿದರು ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರೋ. ಪಿ.ಎಚ್.ಎಫ್ ಆನಂದ ಶೆಟ್ಟಿ, ವಲಯ ಸೇನಾನಿ ರೋ. ಗಣೇಶ್ ಕುಮಾರ್ ಕೆ., ನಿಕಟಪೂರ್ವ ವಲಯ ಸೇನಾನಿ ರೋ. ಇಕ್ಬಾಲ್ ಹಮ್ಮಾಜಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ನಿಕಟಪೂರ್ವ ಅಧ್ಯಕ್ಷೆ ರೋ. ಪಿ.ಎಚ್.ಎಫ್ ಶಲೆಟ್ ಲುವಿಸ್ ಸ್ವಾಗತಿಸಿದರು. ನಿಕಟ ಪೂರ್ವ ಕಾರ್ಯದರ್ಶಿ ರೋ ಪಿ ಎಚ್ ಎಫ್ ರೀನಾ ಆನಂದ್ ಶೆಟ್ಟಿ ಒಂದು ವರ್ಷ ದ ವರದಿ ಯನ್ನು ವಾಚಿಸಿದರು. ನೂತನ ಕಾರ್ಯದರ್ಶಿ ರೋ. ಗಿರೀಶ್ಚಂದ್ರ ಆರ್ ವಂದಿಸಿದರು. ರೋ. ಅಲೆನ್ ಲುವಿಸ್ ಮತ್ತು ಉಪನ್ಯಾಸಕ ಸುಚಿತ್ ಕೋಟ್ಯಾನ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply