ಪರ್ಯಾಯೋತ್ಸವ: ಉಡುಪಿ ಮುದ್ರಕರ ಸಂಘಕ್ಕೆ ಅಭಿನಂದನೆ

ಉಡುಪಿ‌ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಗೌರವಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಪರ್ಯಾಯೋತ್ಸವದ ಸಂದರ್ಭದಲ್ಲಿ ಸಂಘದ ವತಿಯಿಂದ ವಿಶೇಷ ಸಹಕಾರವನ್ನು ನೀಡಲಾಯಿತು. ಈ ಪ್ರಯುಕ್ತ ಮುದ್ರಣಾಲಯಗಳ ಮಾಲಕರ ಸಂಘದ ಗಣ್ಯರನ್ನು ಗುರುವಾರ ಮಧ್ಯಾಹ್ನ ಶ್ರೀ ಕೃಷ್ಣ ಮಠದಲ್ಲಿ ಅಭಿನಂದಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಕೊಡವೂರು, ರಾಜ್ಯ ಸಮನ್ವಯ ಸಮಿತಿಯ ಸಂಚಾಲಕರಾದ ಮಹೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಮುದ್ರಕರ ಸಹಕಾರಿ ಸಂಘದ ಅಧ್ಯಕ್ಷರಾದ ಸುಬ್ಬರಾವ್ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply