ಸಾಧಕರೆಡೆ ನಮ್ಮನಡೆ~ಲಕ್ಷ್ಮೀ ಭಟ್ ಮನೆಕಡೆ

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮ ದ ಅಂಗವಾಗಿ ನಿನ್ನೆ ಸಂಜೆ ನುಕ್ಕೂರು ಶ್ರೀಮತಿ ಲಕ್ಷ್ಮೀ ಜಿ ಭಟ್ ಅವರನ್ನು ಗೌರವಿಸಲಾಯಿತು.

ಶ್ರೀಯುತರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಖ್ಯಾತ ಹರಿದಾಸ, ವಾಗ್ಮಿ, ಶ್ರೀ ಸಿ ರಾವ್ ಶಿವಪುರ, ಸೂರಾಲು ಬ್ರಾಹ್ಮಣ ವಲಯದ ಕಾರ್ಯದರ್ಶಿ ಶ್ರೀ ಅನಂತಕೃಷ್ಣ ವಾಕುಡ, ಪ್ರತಿಷ್ಠಾನ ದ ಅಧ್ಯಕ್ಷ ಚಂದ್ರಶೇಖರ ಅಡಿಗಳು ಬಾರ್ಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನ ದ ಮಾಜಿ ಅಧ್ಯಕ್ಷರಾದ ಡಾ.ವಿಜಯ್ ಮಂಜರ್ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು, ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಜಿ ಭಟ್ , ಸಮಾಜದಲ್ಲಿ ಹೆಣ್ಣಿನ ಕಾರ್ಯವೈಖರಿ, ತಾಯ್ತನದ ಬಗ್ಗೆ ತಾನೇ ಸ್ವತಃ ರಚಿಸಿದ ಸಂಪ್ರದಾಯದ ಹಾಡುಗಳ ಮೂಲಕ ವಿವರಿಸಿದರು, ಶ್ರೀಯುತ ಬಿ ಸಿ ರಾವ್ ಶಿವಪುರ ಮಾತನಾಡಿ , ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧನೆಯನ್ನು ಶ್ಲಾಘಿಸಿದರು, ಪ್ರತಿಷ್ಠಾನ ದ ಅಧ್ಯಕ್ಷರಾದ ಚಂದ್ರಶೇಖರ ಅಡಿಗಳು ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು, ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು ಶಾಂತಿಮತೀ ಪ್ರತಿಷ್ಠಾನ ದ ಸದಸ್ಯರು, ಲಕ್ಷ್ಮೀ ಭಟ್ ಅವರ ಹಿತೈಷಿಗಳು ಭಾಗವಹಿಸಿದ್ದರು,ಈ ಸಂದರ್ಭದಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯರಾದ ಶ್ರೀ ಶಿವರಾಮ ಉಡುಪ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply