ಕುಂದಾಪುರ – ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಬೃಹತ್ ರೆಡ್ ಕ್ರಾಸ್ ಭವನದಲ್ಲಿ ರಕ್ತದಾನ ಶಿಬಿರ

ಕುಂದಾಪುರ – ಕುಂದಾಪುರ ಲಯನ್ಸ್ ಕ್ಲಬ್, ಕುಂದಾಪುರ ರೆಡ್ ಕ್ರಾಸ್ ಸೋಸೈಟಿ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಯುವಮೋರ್ಚಾ ಕುಂದಾಪುರ, ಮಹಿಳಾ ಮೋರ್ಚಾ ಕುಂದಾಪುರದಿಂದ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಬೃಹತ್ ರಕ್ತದಾನ ಶಿಬಿರ ರೆಡ್ ಕ್ರಾಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಪ್ರಕೋಷ್ಟದ ವಿಭಾಗೀಯ ಸಂಚಾಲಕ ಡಾ. ವಿಜಯೀoದ್ರ ವಸಂತ್, ರಕ್ತದಾನಕ್ಕೆ ಮಿಗಿಲಾದ ದಾನ ಮತ್ತೊಂದಿಲ್ಲ ಕೋವಿಡ್ ನ ಈ ಸಮಯದಲ್ಲಿ ಭಾರತದಲ್ಲಿ ಮಾತ್ರ ಕೋವಿಡ್ ನಿಂದಾಗಿ ಸಾವಿಗೀಡಾಗುವವರ ಸಂಖ್ಯೆ ಕಡಿಮೆ ಹಲವಾರು ಸಂದಿಗ್ದ ಸಮಯದಲ್ಲಿ ಕೂಡ ಭಾರತ ಅಭಿವೃದ್ಧಿಯಾಗುತ್ತಿರುವುದು ಸಂತೋಷದ ವಿಚಾರ ಎಂದರು.

ಜಿಲ್ಲಾ ಸಂಚಾಲಕ ಡಾ.ರಾಮಚಂದ್ರ ಕಾಮತ್ ಪ್ರಕೋಷ್ಟದ ಕಾರ್ಯಕ್ರಮಗಳ ಕುರಿತು ತಿಳಿಸಿದರು.ಲಯನ್ಸ್ ಅಧ್ಯಕ್ಷ ರಾಧಾಕೃಷ್ಣ ನಾಯಕ್, ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಡಾ” ವಿದ್ಯಾಧರ, ಡಾ. ರವೀಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ ಉಪಸ್ಥಿತರಿದ್ದರು.ಹೆಚ್ಚಿನ ಸದಸ್ಯರು ರಕ್ತದಾನ ಮಾಡಿದರು.

 
 
 
 
 
 
 
 
 
 
 

Leave a Reply