ಉಡುಪಿಯ ಕೊರೋನಾ ಪ್ರಂಟ್ ಲೈನ್ ವಾರಿಯರ್ಸ್

ನಾಡೋಜ ಡಾಕ್ಟರ್ ಜಿ. ಶಂಕರ್ ನೇತ್ರತ್ವದ ಮೊಗವೀರ ಯುವ  ಸಂಘಟನೆ ಉಡುಪಿ ಜಿಲ್ಲೆ, ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿಯ  ಕೊರೋನಾ ಪ್ರಂಟ್ ಲೈನ್ ವಾರಿಯರ್ಸ್  ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಮ್ರತಪಟ್ಟ ಕೊರೋನಾ ಕೋವಿಡ್-19′ ಸೋಂಕಿತ 57 ವರ್ಷ ಪ್ರಾಯದ ಹಾಲಾಡಿ ಮಡಾಮಕ್ಕಿ ಗೋದೆಬೆಟ್ಟು ನಿವಾಸಿ ಸಂಜೀವ ಶೆಟ್ಟಿ ಅವರ ಮ್ರತದೇಹವನ್ನು ಸ್ವೀಕರಿಸಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎಮ್. ಶಿವರಾಮ್ ಅವರ ಮಾರ್ಗದರ್ಶನದಲ್ಲಿ ತಾಲೂಕು ವೈದ್ಯಾಧಿಕಾರಿ ನಾಗಭೂಷಣ ಉಡುಪ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ” ರಾಜೇಶ್ವರಿ, ಕಿರಿಯ ಆರೋಗ್ಯ ಸಹಾಯಕಿ ವಿಜಯ ಕುಮಾರಿ, ಆಶಾ ಕಾರ್ಯಕರ್ತೆ ಆಶಾ ಹೆಗ್ಡೆ,

ಮಡಾಮಕ್ಕಿ ಗ್ರಾಮ ಪಂಚಾಯತ್ ಸಹಾಯಕ ಗೋಪಾಲ ಅವರ ಉಪಸ್ಥಿತಿಯಲ್ಲಿ ಕುಂದಾಪುರ ಫ್ರಂಟ್ ಲೈನ್ ಕೊರೋನಾ ವಾರಿಯರ್ಸ್‌ಗಳಾದ ರಮೇಶ್ ಟಿ.ಟಿ, ರಾಘವೇಂದ್ರ ನೆಂಪು, ಕೋಟೇಶ್ವರ ಘಟಕದ ಶ್ರೀಧರ್ ಬಿ.ಎನ್, ಸಾಲಿಗ್ರಾಮ ಘಟಕದ ಪ್ರವೀಣ್ ಕುಂದರ್, ಹಾಲಾಡಿ ಘಟಕದ ಮಾಜಿ ಅಧ್ಯಕ್ಷ ಕ್ರಷ್ಣ ಮೊಗವೀರ ಆರ್ಡಿ ಅವರ ಸಹಕಾರ ದಿಂದ ಮ್ರತ ವ್ಯಕ್ತಿಯ ಮನೆಯ ಹತ್ತಿರದ ಜಾಗದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ  ಹಿಂದೂ ಸಂಪ್ರದಾಯದ ಪ್ರಕಾರ ದಹನ ಕ್ರೀಯೆ ನಡೆಸಲಾಯಿತು. ಮ್ರತ ವ್ಯಕ್ತಿಯ ಮಗನಾದ ಮಿಥುನ್ ಶೆಟ್ಟಿ ಚಿತಗೆ ಅಗ್ನಿ ಸ್ಪರ್ಶ ಮಾಡಿದ

 
 
 
 
 
 
 
 
 
 
 

Leave a Reply