ಐಸಿವೈಎಂ ‘ಬ್ಲೂಮ್’ ಯುವ ಸಮಾವೇಶ : ಕಲ್ಯಾಣ್ಪುರ ವಲಯಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ : ಉಡುಪಿ ಧರ್ಮಕ್ಷೇತ್ರದ ಐಸಿವೈಎಮ್‌ನ ಸಮಾವೇಶವು ಸಪ್ಟೆಂಬರ್ 24 ರಂದು ಕಲ್ಯಾಣ್ಪುರ ಮೌಂಟ್‌ರೋಜರಿ ಚರ್ಚಿನ ಸಭಾಂಗಣದಲ್ಲಿ ಅಯೋಜಿಸಲಾಗಿತ್ತು. ಉದ್ಗಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಧರ್ಮಕೇಂದ್ರದ ಶ್ರೇಷ್ಟ ಗುರುಗಳಾದ ವಂ. ಫರ್ಡಿನಾಂಡ್ ಗೊನ್ಸಾಲ್ವೆಸ್ ರವರು ವಹಿಸಿದ್ದರು. ಮುಖ್ಯ ಆಥಿತಿಯಾಗಿ ಸಂತೆಕಟ್ಟೆ ಮೌಂಟ್‌ರೋಜರಿ ಚರ್ಚಿನ ಧರ್ಮಗುರುಗಳಾದ ವಂ. ಗುರು ಡಾ| ರೋಕ್ ಡಿ’ಸೋಜಾ ಮತ್ತು ದಾಯ್ಜಿವಲ್ಡ್ ಮಾಧ್ಯಮದ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ ವಹಿಸಿದ್ದರು.

ಕರ್ನಾಟಕ ಪ್ರಾಂತೀಯ ಐಸಿವೈಎಮ್ ಅಧ್ಯಕ್ಷ ನೇವಿನ್ ಆಂಟ್ಯನಿ, ವೈಸಿಎಸ್/ ವೈಎಸ್‌ಎಮ್ ರಾಷ್ಟೀಯ ಅಧ್ಯಕ್ಷ ಅ್ಯನ್ಸನ್ ನಜರೆತ್, ಸಂತೆಕಟ್ಟೆ ಮೌoಟ್‌ರೋಜರಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಲೂಕ್ ಡಿ’ಸೋಜಾ, ಉಡುಪಿ ಧರ್ಮಕೇಂದ್ರದ ಐಸಿವೈಎಮ್ ನಿರ್ದೇಶರಾದ ವಂ. ಗುರು ಸ್ಟೀವನ್ ಪೆರ್ನಾಂಡಿಸ್, ಉಡುಪಿ ವಲಯದ ಐಸಿವೈಯಮ್ ನಿರ್ದೇಶರಾದ ವಂ. ಗುರು ರೋನ್ಸನ್ ಡಿ’ಸೋಜಾ, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಅಧ್ಯಕ್ಷೆ ಅ್ಯಶ್ಲಿ ಡಿ’ಸೋಜಾ, ಕಾರ್ಯದರ್ಶಿ ಶೈನಿ ಅಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply