ಹ್ಯೂಮನ್ ರೈಟ್ಸ್ ಪೇಡರೇಷನ್ ಆಫ್ ಇಂಡಿಯಾ ಉಡುಪಿ ನಿಯೋಗವು ನೂತನ ಹೆಚ್ಚುವರಿ ಪೊಲೀಸ್ ಉಪಅಧೀಕ್ಷಕರ ಭೇಟಿ

ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡಿ ಉಡುಪಿ ಜಿಲ್ಲೆಗೆ ನೂತನ ಹೆಚ್ಚುವರಿ ಪೊಲೀಸ್ ಉಪ ಅಧೀಕ್ಷಕರು ಅಧಿಕಾರ ಸ್ವೀಕರಿಸಿರುವ ಶ್ರೀಯುತ ಪ್ರಭು ಡಿ ಟಿ ಅವರನ್ನು ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ನಿಯೋಗವು ಸ್ವಾಗತಿಸಿ, ಅಭಿನಂದಿಸಿತು.

ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ಉಪಾಧ್ಯಕ್ಷರಾದ ಉದಯ ನಾಯ್ಕ್ ಹೆಚ್ಚುವರಿ ಪೊಲೀಸ್ ಉಪ ಅಧೀಕ್ಷಕರು ಅವರಿಗೆ ಅಭಿನಂದನೆಯ ಮಾತುಗಳನ್ನು ತಿಳಿಸಿ, ನಮ್ಮ ಸಂಸ್ಥೆಯು ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ, ದೌರ್ಜನ್ಯಗಳ ವಿರುದ್ಧ ಕಾನೂನತ್ಮಕ ಹೋರಾಟ, ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವ ಬಗ್ಗೆ ಅರಿವು ಮೂಡಿಸುವ ಉತ್ತಮ ಕೆಲಸ ಮಾಡುತ್ತಿದ್ದೇವೆ ಎಂದರು. ಅಧ್ಯಕ್ಷೆ ಅಡ್ವಕೇಟ್ ಪ್ರೀತಿ ವೈ ಕುಂದಾಪುರ ಅಭಿನಂದಿಸಿದರು. ಒಳ್ಳೆಯ ಕೆಲಸ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ವಿಭಾಗ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಮಾಧ್ಯಮಗಳ ಮೂಲಕ ತಿಳಿದು ಗಮನಿಸಿದ್ದೇನೆ ಎನ್ನುವುದಾಗಿ ಹೆಚ್ಚುವರಿ ಪೊಲೀಸ್ ಉಪ ಅಧೀಕ್ಷಕರು (ASP-2) ಶ್ರೀ ಪ್ರಭು ಡಿ ಟಿ ತಿಳಿಸಿದರು. ಅಭಿನಂದನೆ ಸ್ವೀಕರಿಸಿ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಸಂಸ್ಥೆಯ ಎಲ್ಲಾ ಕೆಲಸಗಳು ಮೊದಲಿಂದಲೂ ಗಮನಿಸಿದ್ದು ಮೆಚ್ಚುಗೆಯ ಮಾತುಗಳನ್ನು ತಿಳಿಸಿ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸೆಕ್ರೆಟರಿ ಚಂದ್ರ ಅಮೀನ್, ಹಾಗೂ ಸಂಸ್ಥೆಯ ನಿರ್ದೇಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply