ಸ್ವಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಉಚಿತ ಕ್ಷೌರ ಕಾರ್ಯಕ್ರಮ

ಉಡುಪಿ : ಜೇಸಿಐ ಉಡುಪಿ ಸಿಟಿ ನೇತೃತ್ವದಲ್ಲಿ ,ಆದಿಉಡುಪಿ ಗೌರವ ಸೆಲೂನ್ ಇದರ ಮಾಲೀಕ, ಸಮಾಜ ಸೇವಕ ಸತೀಶ್ ಸುವರ್ಣರ ಸಹಕಾರದೊಂದಿಗೆ ಇಂದು ಬೆಳಿಗ್ಗೆ ಉಪ್ಪೂರು ಸ್ವಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಉಚಿತ ಕ್ಷೌರ ಕಾರ್ಯಕ್ರಮವನ್ನು ನಡೆಸಲಾಯಿತು.

ಉಡುಪಿ ಸಿಟಿ ಜೆಸಿಐ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಸಮಾಜಮುಖಿಯಾಗಿ ಕೈ ಜೋಡಿಸಿದಾಗ ಇಂತಹ ವಿಶೇಷ ಸಂಸ್ಥೆಗಳಿಗೆ ಆಧಾರಸ್ಥಂಭವಾಗುತ್ತದೆ ಎಂದರು.ಸ್ಪಂದನ ಸಂಸ್ಥೆಯ ಪ್ರಾಂಶುಪಾಲ ಜನಾರ್ದನ್,ಉಮೇಶ್, ಸಿಬ್ಬಂದಿ ವರ್ಗ ಹಾಗೂ ವಿಶೇಷ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply