ಜಿಲ್ಲಾ ಮಟ್ಟದ ಇಂಗ್ಲೀಷ್ ಉಪನ್ಯಾಸಕರ ಕಾರ್ಯಾಗಾರ

ಉಡುಪಿ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಇಂಗ್ಲೀಷ್ ಉಪನ್ಯಾಸಕರ ಪೋರಂ ವತಿಯಿಂದ ಉಡುಪಿ ಬಾಲಕಿಯರ ಪ. ಪೂ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಇಂಗ್ಲೀಷ್ ಉಪನ್ಯಾಸಕರ ಕಾರ್ಯಾಗಾರವನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಹಲವು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಯು ಅಗ್ರಸ್ಥಾನವನ್ನು ಉಳಿಸಿಕೊಂಡು ಬಂದಿದೆ.ಬೇರೆ ಪ್ರದೇಶದ ಜನರು ಶಿಕ್ಷಣಕ್ಕೆ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹೆಮ್ಮೆ ಅನಿಸುತ್ತದೆ.ಈ ಪರಂಪರೆ ಮುಂದುವರಿಯಲು ನಾವೆಲ್ಲರೂ ಶ್ರಮಿಸೋಣ ಎಂದರು.ಇಂಗ್ಲೀಷ್ ಕಲಿಕೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಅಸಮತೋಲನವನ್ನು ಸರಿಪಡಿಸಲು ಇಂತಹ ಕಾರ್ಯಗಾರಗಳು ಸಹಕಾರಿಯಾಗಲಿದೆ ಎಂದರು. 

ಪ.‌ಪೂ ಉಪನಿರ್ದೇಶಕ ಭಗವಂತ ಕಟ್ಟೀಮನಿ ಫಲಿತಾಂಶ ಸುಧಾರಣೆಯ ಕುರಿತು ಸಲಹೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ರುದ್ರೇ ಗೌಡ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಉಪಸ್ಥಿತರಿದ್ದರು. ಜಿಲ್ಲಾ ಇಂಗ್ಲೀಷ್ ಪೋರಂ ಅಧ್ಯಕ್ಷೆ ಅಮಂಡಾ ಸ್ವಿಕ್ವೇರ ಸ್ವಾಗತಿಸಿದರು. ಕಾರ್ಯದರ್ಶಿ ರಾಜೀವ್ ವಂದಿಸಿ, ಉಪನ್ಯಾಸಕಿ ಭಾಗ್ಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. 

 

 
 
 
 
 
 
 
 
 
 
 

Leave a Reply