ಕಾರ್ಪೊರೇಷನ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಕೊಡುಗೆ

ಉಡುಪಿ: ಕಾರ್ಪೊರೇಷನ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಶ್ರೀ ಕೃಷ್ಣ ಬಾಲನಿಕೇತನಕ್ಕೆ ತರಕಾರಿ ಇಡುವ ಕಪಾಟು, ಬಡಿಸುವ ಬಂಡಿಯನ್ನು ನೀಡಲಾಗಿದ್ದು ಅದರ ಹಸ್ತಾಂತರದ ಕಾರ್ಯಕ್ರಮವು ಬಾಲನಿಕೇತನದ ಅಧ್ಯಕ್ಷ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು.

ಪೂಜ್ಯ ಶ್ರೀ ಗಳವರು ಯೂನಿಯನ್ ನ ಈ ಸಮಾಜ ಮುಖಿಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ನ ಉಪಾಧ್ಯಕ್ಷ ರಘುರಾಮ ಕೃಷ್ಣ ಬಲ್ಲಾಳ, ಸಹಕಾರ್ಯದರ್ಶಿ ಹೆರಾಲ್ಡ್ ಡಿಸೋಜ, ಉಡುಪಿ ವಲಯ ಕಾರ್ಯದರ್ಶಿ ನಾಗೇಶ್ ನಾಯಕ್, ಏರಿಯಾ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮತ್ತು ರಮೇಶ್ ಅವರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ಬಾಲನಿಕೇತನದ ಉಪಾಧ್ಯಕ್ಷ ಪ್ರೋ. ಕಮಲಾಕ್ಷ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ರಘುರಾಮ ಆಚಾರ್ಯ, ರಾಮಚಂದ್ರ ಸನಿಲ್, ಶ್ರೀ ರಾಘವೇಂದ್ರ ರಾವ್, ಎಸ್ ವಿ ಭಟ್, ಗುರುರಾಜ ಭಟ್, ಸುಹಾನಿ ಕಾಮತ್, ರೋಟರಿ ಅಧ್ಯಕ್ಷ ರೋ.ಹೇಮಂತಕಾಂತ್, ಕಾರ್ಯದರ್ಶಿ ರೋ. ಜೆ.ಜಿ.ಪ್ರಭು, ರೋ.ಲಕ್ಷ್ಮೀನಾರಾಯಣ, ರೋ.ರಾಧಿಕಾ ಲಕ್ಷ್ಮೀನಾರಾಯಣ, ರೋ.ದಿನೇಶ್ ಭಂಡಾರಿ, ರೋ.ವನಿತಾ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply