ಯಕ್ಷಗಾನ ಕಲಾರಂಗದ ಮೂವತ್ತೆರಡನೇ ಮನೆ ಹಸ್ತಾಂತರ

ಉಡುಪಿ : ಸಂಸ್ಥೆಯ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯಾದ ವಿದ್ಯಾಪೋಷಕ್ ವಿದ್ಯಾರ್ಥಿನಿ, ಪಳ್ಳಿ ನಿಂಜೂರಿನ ಶ್ರೀಮತಿ ಕುಸುಮಾ ಹಾಗೂ ಶ್ರೀ ಗೋಪಾಲ ಆಚಾರ್ಯ ಇವರ ಪುತ್ರಿ ದೀಕ್ಷಾ (ದ್ವಿತೀಯ ಪಿ.ಯು.ಸಿ) ಇವಳಿಗೆ ಶ್ರೀ ಅರುಣ್ ಕುಮಾರ್‍ರವರು ನಿರ್ಮಿಸಿಕೊಟ್ಟ ನೂತನ ಮನೆ ‘ಶ್ರೀದೇವಿ ನಿಲಯ’ವನ್ನು ಶ್ರೀಮತಿ ಶ್ರೀದೇವಿ ಅರುಣ್ ಕುಮಾರ್ ಮತ್ತು ಶ್ರೀ ಅರುಣ್ ಕುಮಾರ್ ಅವರು 07-07-2022 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಯಕ್ಷಗಾನ ಕಲಾರಂಗದ ಸಮಾಜಮುಖೀ ಕಾರ್ಯಗಳಿಂದ ನಾವು ಪ್ರಭಾವಿತರಾಗಿದ್ದು,ಮುಂದೆಯೂ ಸಂಸ್ಥೆಯೊಂದಿಗೆ ನಾವಿರುತ್ತೇವೆ.ಈ ದಿನ ನಮ್ಮ ಪಾಲಿಗೆ ಧನ್ಯತೆಯ ಕ್ಷಣವಾಗಿದೆ ಎಂದು ಈ ಸಂದರ್ಭದಲ್ಲಿ ನುಡಿದರು.ದೀಕ್ಷಾ ಮತ್ತು ಕಾರ್ತಿಕ್ ಕೃತಜ್ಞತೆ ಮಾತುಗಳನ್ನಾಡಿ,ನಾವು ಚೆನ್ನಾಗಿ ಕಲಿತು ಮುಂದೆ ವಿದ್ಯಾಪೋಷಕ್ ಸಂಸ್ಥೆಗೆ ನೆರವಾಗತ್ತೇವೆ ಎಂದರು.

ಯು. ವಿಶ್ವನಾಥ ಶೆಣೈ, ಸದಾನಂದ ಶೆಣೈ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ್ ಹೆಗ್ಡೆ,ವಿಜಯ ಕುಮಾರ್ ಮುದ್ರಾಡಿ,ಅನಂತರಾಜ್ ಉಪಾಧ್ಯ, ಎ. ನಟರಾಜ ಉಪಾಧ್ಯ, ನಾಗಭೂಷಣ್ ಭಟ್, ಕಿಶೋರ್ ಸಿ. ಉದ್ಯಾವರ, ಕೆ. ಅಜಿತ್ ಕುಮಾರ್, ಕೃಷ್ಣಮೂರ್ತಿ ಭಟ್, ದಿನೇಶ್ ಪೂಜಾರಿ, ಗಣೇಶ್ ಬ್ರಹ್ಮಾವರ, ಅಶೋಕ್ ಎಂ., ರಾಜೇಶ್ ನಾವುಡ, ಆನಂದ ಶೆಟ್ಟಿ, ಮಂಜುನಾಥ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ 32ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ 3 ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸುತ್ತಾ ನುಡಿದರು. ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದೊಗೆ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 

Leave a Reply