ಶಿರ್ವ, ಮುದರಂಗಡಿಯ ಪ್ರದೇಶದಲ್ಲಿ, ಕೋವಿಡ್ ಪೀಡಿತ ಮಕ್ಕಳಿಗೆ ಹಾಗೂ ಕೆಲಸವಿಲ್ಲದೆ ಅಸಹಾಯಕ ಪರಿಸ್ಥಿತಿಯಲ್ಲಿರುವ ಮೂರು ಬಡ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವೆಂದು ಚೈಲ್ಡ್ಲೈನ್- 1098 ಉಡುಪಿಗೆ ಕರೆಬಂದಾಗ ರೋಟರಿ ಉಡುಪಿಯ ಸಹಯೋಗದೊಂದಿಗೆ ಮೂರು ಕುಟುಂಬಕ್ಕೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ, ರೋ.ವನಿತ ಉಪಾಧ್ಯಾಯ, ಚೈಲ್ಡ್ಲೈನ್- 1098 ಉಡುಪಿಯ ನಿರ್ದೇಶಕ ಶ್ರೀಯುತ ರೋ.ರಾಮಚಂದ್ರ ಉಪಾಧ್ಯಾಯ, ಸ್ಥಳೀಯ ಅಂಗನವಾಡಿ ಕಾಯರ್ತೆಯರು ಹಾಗೂ ಚೈಲ್ಡ್ಲೈನ್- 1098 ಉಡುಪಿಯ ಸಿಬ್ಬಂದಿಗಳಾದ ಕು.ಸುನೀತ ಮತ್ತು ಶ್ರೀ.ಪ್ರಮೋದ್ ಉಪಸ್ಥಿತರಿದ್ದರು.