ಆಫೀಸರ್ ವಾರ್ಡನ್ ಸರ್ವಿಸ್ ಸಿವಿಲ್ ಡಿಫೆನ್ಸ್ ಆಗಿ ಡಾ। ವಿಜಯೇಂದ್ರ ವಸಂತ್ ನೇಮಕ 

ಜಿಲ್ಲೆಯ ಖ್ಯಾತ ದಂತ ವೈದ್ಯರಾದ ವಿಜಯೇಂದ್ರ ವಸಂತ್ ಇವರು ಉಡುಪಿ ಜಿಲ್ಲಾ ಪ್ರಥಮ ಕಮಾಂಡಿಂಗ್ ಆಫೀಸರ್ ವಾರ್ಡನ್ ಸರ್ವಿಸ್ ಸಿವಿಲ್ ಡಿಫೆನ್ಸ್ ಆಗಿ  ಶುಕ್ರವಾರದಂದು ಅಧಿಕಾರ ಸ್ವೀಕರಿಸಿರುತ್ತಾರೆ. 
ಇವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠ ಅಧಿಕಾರಿಗಳ ಶಿಫಾರಸಿನ ಮೇಲೆ ಡೈರೆಕ್ಟರ್ ಜನರಲ್, ಪೊಲೀಸ್ ಕಮಾಂಡೆಂಟ್ ಜನರಲ್ ಹೋಂ ಗಾರ್ಡ್ಸ್, ಡೈರೆಕ್ಟರ್ ಸಿವಿಲ್ ಡಿಫೆನ್ಸ್ ಅಲೋಕ್ ಮೋಹನ್ ನೇಮಕ ಮಾಡಿರುತ್ತಾರೆ.
 
ಈ ಸಂದರ್ಭದಲ್ಲಿ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಡಾ। ಪ್ರಶಾಂತ್ ಶೆಟ್ಟಿ, ಡೆಪ್ಯುಟಿ ಕಮಾಂಡೆಂಟ್ ಶ್ರೀ ರಮೇಶ್, ಆಫೀಸ್ ಇನ್ ಚಾರ್ಜ್ ಶ್ರೀಮತಿ ಕವಿತಾ,  ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ,  ಉದ್ಯಮಿ ಶ್ರೀ ಯುವರಾಜ್ ಸಾಲಿಯಾನ್ ಕಮಲಾಭಾಯಿ ಶಾಲಾ  ಮುಖ್ಯೋಪಾ ಧ್ಯಯ ಸುದರ್ಶನ್ ನಾಯಕ್ ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply