ಸುಹಾಸಂ ಉಡುಪಿ ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಜಂಟಿಯಾಗಿ ಲೇಖಕ ಎಚ್ ಶಾಂತರಾಜ ಐತಾಳರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಡಿಸೆಂಬರ್ 2, 2023 ಶನಿವಾರ ಸಂಜೆ ಗಂಟೆ 4ಕ್ಕೆ ಹೋಟೆಲ್ ಕಿದಿಯೂರು ರೂಫ್ ಟಾಪ್ ನಲ್ಲಿ ನಡೆಯಲಿದೆ.
ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರು ಬಿಸಿಲ್ಗುದುರೆಯ ಬೆನ್ನೇರಿದವ ಹಾಗೂ ಬಾಲಂಗೋಚಿ ಎಂಬ ಎರಡು ಕೃತಿಗಳನ್ನ ಲೋಕಾರ್ಪಣೆ ಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಸ್ .ಪ್ರದೀಪ್ ಕುಮಾರ್ ಕಲ್ಕೂರ್ ವಹಿಸಲಿರುವರು.
ಸಾಂಸ್ಕೃತಿಕ ಸಂಘಟಕ ಭುವನ ಪ್ರಸಾದ ಹೆಗ್ಡೆ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಆಡಿಗ ಉಪಸ್ಥಿತರಿರುವರು. ಶ್ರೀನಿವಾಸ ಉಪಾಧ್ಯಾಯ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ ಎಂದು ಕೃತಿಕರ್ತ ಎಚ್ ಶಾಂತರಾಜ ಐತಾಳ್ ಹಾಗೂ ಸುಹಾಸಂ ಕಾರ್ಯದರ್ಶಿ ಗೋಪಾಲ ಭಟ್ಟ (ಕೂಗೋ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.