ಪ್ರೋ.ಎನ್ ಲಕ್ಷ್ಮೀನಾರಾಯಣ ಭಟ್ ರವರಿಗೆ ಅಭಿನಂದನೆ

 ಉಡುಪಿ: ಎಸ್.ಎಂ. ಎಸ್. ಪಿ ಸಭಾ ಮತ್ತು ಪರ್ಯಾಯ ಶ್ರೀಅದಮಾರು ಮಠ- ಪರ್ಯಾಯ ಶ್ರೀಕೃಷ್ಣ ಮಠ ಉಡುಪಿ.ಇವರ ಆಶ್ರಯದಲ್ಲಿ, ಶ್ರೀಮನ್ಮಧ್ವಸಿದ್ಧಾಂತ ಪ್ರಭೋಧಕ ಸಂಸ್ಕೃತ ಅಧ್ಯಯನ ಕೇಂದ್ರ ಉಡುಪಿ ಇಲ್ಲಿ ಅಧ್ಯಯನ ಮಾಡಿ, ಅಲಂಕಾರಶಾಸ್ತ್ರ ಪ್ರಾಧ್ಯಪಕರಾಗಿ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿರುವ ಪ್ರೋ. ಎನ್. ಲಕ್ಷ್ಮೀನಾರಾಯಣ ಭಟ್ ಅವರಿಗೆ ಸಂಮಾನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ಜುಲೈ 24, ಶನಿವಾರದ ದಿನ ಅಪರಾಹ್ನ 4 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀಶ್ರೀ ಈಶಪ್ರೀಯತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಅದಮಾರು ಮಠ, ಶ್ರೀಶ್ರೀ ವಿಶ್ವಪ್ರೀಯತೀರ್ಥ ಶ್ರೀಪಾದರು ಅದಮಾರು ಮಠ, ಶ್ರೀಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪಲಿಮಾರು ಮಠ, ಪರಮಪೂಜ್ಯರುಗಳ  ದಿವ್ಯಉಪಸ್ಥಿತಿ ಇರಲಿದೆ.  

 
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ, ಮತ್ತು ಪ್ರೋ ಕೆ. ಇ. ದೇವನಾಥನ್ ಕುಲಪತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಇವರು ಮುಖ್ಯ  ಅಭ್ಯಾಗತರಾಗಿರುವರು. 
 
ಆಗಮ ವಿದ್ವಾಂಸರಾದ ಪಂಜ ಭಾಸ್ಕರ ಭಟ್ ಅವರು ಅಭಿನಂದನಾ ಭಾಷಣ ಮಾಡಲಿರುವರು ಎಂದು  ಪ್ರಕಟಣೆಯಲ್ಲಿ ತಿಳಿಸಲಾಗಿದೆ.  
 
 
 
 
 
 
 
 
 
 
 

Leave a Reply