ಡಾ.ಬಾಲಕೃಷ್ಣ ಎಸ್ ಮದ್ದೋಡಿ ಮಡಿಲಿಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ 2023”

ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ನುಳ್ಳಿಪಾಡಿ ಕಾಸರಗೋಡು ಇದರ ಸಭಾಂಗಣದಲ್ಲಿ ನಡೆದ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿಯ ಶಿಕ್ಷಣತಜ್ಞ, ಸಾಮಾಜಿಕ ಮುಂದಾಳು, ಮೇರುವ್ಯಕ್ತಿತ್ವದ ಡಾ ಬಾಲಕೃಷ್ಣ ಎಸ್ ಮದ್ದೋಡಿ ಯವರಿಗೆ  ಕಾಸರಗೋಡಿನ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2023” ನೀಡಿ ಗೌರವಿಸಲಾಯಿತು.
 ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ , ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ ಶಿಕ್ಷಣ ತಜ್ಞ ಅಭಿಲಾಷ್ ಕ್ಷತ್ರಿಯ ಶಾಲುಹೊದಿಸಿ ಗೌರವಿಸಿ, ಅಭಿನಂದನಾ ಭಾಷಣ ಮಾಡಿದರು. ಕಾರ್ಯದರ್ಶಿ ನವೀನಚಂದ್ರ ಅನಂಗೂರ್ ಬೇಕಲ ರಾಮನಾಯಕರ ಸಮಗ್ರ ಸಾಹಿತ್ಯ ಸಂಪುಟ ಪುಸ್ತಕ ನೀಡಿ ಗೌರವಿಸಿದರು.
 
 
 
 
 
 
 
 
 
 
 

Leave a Reply