ಮಂಗಳೂರು: ಉಡುಪಿಯ ಕುಂಜಿಬೆಟ್ಟು ಉಪೆಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಆದರ್ಶ್ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲೈಡ್ ಆರ್ಟ್ಸ್ ಮಂಗಳೂರಿನ ಭಾರತಿ ವಿದ್ಯಾರ್ಥಿ ಭವನದಲ್ಲಿ ಆಯೋಜಿಸಿದ್ದ 31ನೇ ರಾಜ್ಯಮಟ್ಟದ ಅಂತರ್ ಶಾಖೆ ಕರಾಟೆ ಸ್ಪರ್ಧೆಯ ಪುರುಷರ ವಿಭಾಗದ ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.