ಕು.ದಿವ್ಯಶ್ರೀ ಭಟ್ ಅವರಿಗೆ ಈ ಸಲದ ‘ರಾಗ ಧನ ಪಲ್ಲವಿ’ ಪ್ರಶಸ್ತಿ

ಡಾ.ಸುಶೀಲಾ ಉಪಾಧ್ಯಾಯ ಅವರ ಹೆಸರಿನಲ್ಲಿ ಡಾ.ಯು.ಪಿ.ಉಪಾಧ್ಯಾಯರು ಪ್ರಾಯೋಜಿಸಿರುವ ‘ರಾಗ ಧನ ಪಲ್ಲವಿ ಪ್ರಶಸ್ತಿ’ಯು ಮಣಿಪಾಲದ ಕು. ದಿವ್ಯಶ್ರೀ ಭಟ್ ಅವರಿಗೆ ಕೊಡಲಾಗುತ್ತದೆ.

ಇದೇ ಫೆಬ್ರವರಿ 3ರಂದು ನಡೆಯುವ ರಾಗ ಧನ ಸಂಸ್ಥೆಯ ಶ್ರೀ ಪುರಂದರ ದಾಸರು ಹಾಗೂ ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ನೀಡಲಾಗುವುದು. ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿರುವ ಕು.ದಿವ್ಯಶ್ರೀ ಭಟ್, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ಶಿಷ್ಯವೇತನ, ಸಂಗೀತ ಪರಿಷತ್ತಿನ ದಕ್ಷಿಣ ಭಾರತ ಮಟ್ಟದ ರಾಗಂ ತಾನಂ ಪಲ್ಲವಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚೆನ್ನೈನ ಇಂಡಿಯನ್ ಫೈನ್ ಆರ್ಟ್ಸ್ ನಿಂದ ಪುರಂದರದಾಸರ ಹಾಗೂ ಮುತ್ತಯ್ಯ ಭಾಗವತರ ಕೃತಿ ಗಾಯನದಲ್ಲಿ ಪ್ರಥಮ, ಬೆಂಗಳೂರಿನ ಗಾಯನ ಸಮಾಜದವರ ವೀಣೆ ಶೇಷಣ್ಣ ಕೃತಿ ಗಾಯನದಲ್ಲಿ ಪ್ರಥಮ ಹಾಗೂ ಇತರ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ. ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರೆ ಆದ ಇವರು ಚಿತ್ರ ಕಲೆ ಹಾಗೂ ಭರತನಾಟ್ಯದಲ್ಲೂ ಪ್ರಾವೀಣ್ಯತೆ ಪಡೆದಿರುತ್ತಾರೆ. ಇವರು ಸರಿಗಮ ಭಾರತಿಯ ಗುರು ವಿದುಷಿ ಉಮಾಶಂಕರಿ ಹಾಗೂ ಪ್ರಸ್ತುತ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಅವರ ಶಿಷ್ಯೆ. ಇವರು ಎಂ.ಐ.ಟಿ. ಪ್ರೊ.ಡಾ.ಕುಮಾರಶ್ಯಾಮ ಹಾಗೂ ಜಯಶ್ರೀ ದಂಪತಿಗಳ ಸುಪುತ್ರಿ.

 
 
 
 
 
 
 
 
 
 
 

Leave a Reply