ಜಾಗತಿಕ ಆಶ್ಡೆನ್ ಪ್ರಶಸ್ತಿ: ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸುಸ್ಥಿರ ಇಂಧನ ಹಾಗೂ ಗ್ರಾಮೀಣ ಕೌಶಲ ವಿಭಾಗದ ಸೇವೆ ಪರಿಗಣನೆ

ಮಣಿಪಾಲ:  ಪ್ರತಿಷ್ಠಿತ ಆಶ್ಡೆನ್ ಪ್ರಶಸ್ತಿಯ ಅಡಿಯಲ್ಲಿ ಶಕ್ತಿಯನ್ನು ತಲುಪಿಸುವ ಕೌಶಲ ವೃದ್ಧಿಯ ವಿಭಾಗದ ದೀರ್ಘಪಟ್ಟಿಯಲ್ಲಿ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಆಯ್ಕೆಯಾಗಿದೆ .ಯುನೈಟೆಡ್ ಕಿಂಗ್‍ಡಮ್ ನ ಆಶ್ಡೆನ್ ಕಳೆದ 20ವರ್ಷಗಳಿಂದ ಪರಿವರ್ತಕ ಹವಾಮಾನ ಪರಿಹಾರಗಳನ್ನು ಬೆಂಬಲಿಸುತ್ತಾ ಬಂದಿದೆ. 2021 ರ ಆಶ್ಡೆನ್ ಪ್ರಶಸ್ತಿಗಾಗಿ 800ಕ್ಕೂ ಹೆಚ್ಚು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಇದೀಗ 38 ಸಂಸ್ಥೆಗಳನ್ನು ದೀರ್ಘ ಪಟ್ಟಿಯಲ್ಲಿ ಹೆಸರಿಸಿದ್ದು, ಅದರಲ್ಲಿ ಬಿವಿಟಿ ಕೂಡ ಒಂದು.
ಸಂಸ್ಥೆಗಳನ್ನು ಸ್ವತಃ ಭೇಟಿ ಮಾಡಿ, ತಜ್ಞರ ಅಭಿಪ್ರಾಯ ಪಡೆಯುವ ಮೂಲಕ ಕಠಿಣ ಮೌಲ್ಯಮಾಪನ ಹಾಗೂ ತೀರ್ಪಿನ ಪ್ರಕ್ರಿಯೆ ನಡೆಯಲಿದೆ .ಪ್ರಶಸ್ತಿ ವಿಜೇತರನ್ನು ನವೆಂಬರ್ 2021ರಲ್ಲಿ ಘೋಷಿಸಲಾಗುವುದು. ಭಾರತೀಯ ವಿಕಾಸ  ಟ್ರಸ್ಟ್  (ಬಿವಿಟಿ) ಸಂಸ್ಥೆಯನ್ನು  ಸ್ವಯಂ ಸಬಲೀಕರಣದ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಗ್ರಾಮೀಣ ಭಾರತಕ್ಕೆ ದೊಡ್ಡ ಅಪಾಯ ವೆಂದರೆ ಯುವಜನರು ನಗರ ಪ್ರದೇಶಗಳಿಗೆ ವಲಸೆಹೋಗುವುದು. 
ಉತ್ತಮ ಭವಿಷ್ಯ ಮತ್ತು ಉತ್ತಮ ಜೀವನ ಮಟ್ಟದ ಹುಡುಕಾಟದ ಕಾರಣದಿಂದ ಉಂಟಾಗುವ ಈ ವಲಸೆ ಯಿಂದಾಗಿ ನಗರೀಕರಣ ಹೆಚ್ಚುತ್ತದೆ ಹಾಗೂ ಕೌಶಲಗಳ ಕೊರತೆ ಜಾಸ್ತಿಯಾಗುತ್ತದೆ. 1996ರಲ್ಲಿ ಬಿವಿಟಿ ವಿಶ್ವಾಸಾರ್ಹ ಹಾಗೂ ಕೈಗೆಟುಕಬಹುದಾದ ಇಂಧನ ಪರಿಹಾರಗಳ ಅಗತ್ಯವನ್ನು ಮನಗಂಡಿತು. ಬಡತನ ನಿವಾರಿಸಲು ಇದೊಂದು ಪ್ರಮುಖ ಕ್ರಮ ಎಂಬುದನ್ನೂ ಗುರುತಿಸಿತು. ಶಕ್ತಿಯ ಕುರಿತಾಗಿ 2001 ರಿಂದ ಸುಮಾರು 1000ತರಬೇತಿಗಳನ್ನು ಬಿವಿಟಿ ನೀಡಿದ್ದು, ಸರಿಸುಮಾರು 50,000ಅಂತಿಮ ಬಳಕೆದಾರರು ಇದರಲ್ಲಿ ನೇರವಾಗಿ ಭಾಗವಹಿಸಿದ್ದಾರೆ.
 ಜೊತೆಗೆ, 680ಕ್ಕೂ ಹೆಚ್ಚು ವಿವಿಧ ರೀತಿಯ ಹಣಕಾಸು ಸಂಸ್ಥೆಗಳಿಂದ 14,000 ಹಣಕಾಸುದಾರರನ್ನು ಕೇಂದ್ರವಾಗಿಟ್ಟುಕೊಂಡು 500ಕ್ಕೂ ಹೆಚ್ಚು ಬ್ಯಾಂಕರ್ ತರಬೇತಿಗಳನ್ನು ನೀಡಿದೆ. ಇದರ ಪರಿಣಾಮವಾಗಿ ಸುಮಾರು 6,00,000 ಸೌರ ಶಕ್ತಿಆಧಾರಿತ ಪರಿಹಾರಗಳಿಗೆ ಸಾಲವನ್ನು ನಿಯೋಜಿಸಲಾಗಿತ್ತು. 
ಆಶ್ಡೆನ್ನ ಮುಖ್ಯ ಕಾರ್ಯನಿರ್ವಹಣಾ ಅಧಕಾರಿ ಹ್ಯಾರಿಯಟ್ ಲಾಂಬ್ ಹೀಗೆಂದರು –
“ಸರ್ಕಾರಗಳು, ಹವಾಮಾನ ನಾವೀನ್ಯಕಾರರು ಮತ್ತು ಕಾರ್ಯಕರ್ತರು ಸ್ಕಾಟ್ಲಾಂಡ್ ದೇಶದ ಗ್ಲಾಸ್ಗೋದಲ್ಲಿ ಈ ವರ್ಷ ನಡೆಯಲಿರುವ ಅಔP 26 ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಸೇರಲಿದ್ದಾರೆ. ಇಂತಹ ಸಮಯದಲ್ಲಿ ಸ್ಫೂರ್ತಿದಾಯಕ ಹವಾಮಾನ ಚಾಂಪಿಯನ್ ಗಳು ಕಡಿಮೆ ಸಮಯದಲ್ಲಿ, ದೊಡ್ಡ ಮಟ್ಟದಲ್ಲಿ ಪುನರಾವರ್ತಿಸ ಬಹುದಾದ ಪರಿಹಾರಗಳನ್ನು ಪ್ರದರ್ಶಿಸುತ್ತಾರೆ.
ಆಶ್ಡೆನ ಪ್ರ್ರಶಸ್ತಿಯು ನ್ಯಾಯೋಚಿತವಾದ ಅತ್ಯಾಧುನಿಕ ಹಾಗೂ ಪರಿಸರ ಸ್ನೇಹಿ ಉಪಕ್ರಮಗಳ ಮೇಲೆ ಕೇಂದ್ರಿತ ವಾಗಿದೆ. ಇದು ಹವಾಮಾನನ್ಯಾಯವನ್ನು ಒದಗಿಸುವುದಲ್ಲದೇ ಉತ್ತಮ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಜನರಿಗೆ ಹಸಿರು ಕೌಶಲಗಳಲ್ಲಿ ತರಬೇತಿ ನೀಡುತ್ತದೆ ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಗೊಳಿಸಲು ಸಹಾಯಮಾಡುತ್ತದೆ.
ಈ ವರ್ಷ ಸಲ್ಲಿಸಲ್ಪಟ್ಟ ಅರ್ಜಿಗಳ ಪೈಕಿ ಒಂದಕ್ಕಿಂತ ಒಂದು ಅದ್ಭುತ ಪರಿಹಾರಗಳು ಹಾಗೂ ಉಪಕ್ರಮಗಳಿದ್ದು, ನಿರ್ಣಯಿಸುವುದು ಕಠಿಣವಾಗಲಿದೆ! ನಾವು ವಿಜೇತರನ್ನು ಘೋಷಿಸಿದಾಗಲೇ ಅವರ ಅತ್ಯುತ್ತಮ ಆವಿಷ್ಕಾರಗಳು ಜಗತ್ತಿಗೆ  ತೆರೆದುಕೊಳ್ಳಲಿವೆ. ನಾವೂ ಅದಕ್ಕಾಗಿಯೇ ಕಾಯುತ್ತಿದ್ದೇವೆ.
ಬಿವಿಟಿಯವ್ಯವಸ್ಥಾಪಕ ಟ್ರಸ್ಟಿ, ಅಶೋಕ್ ಪೈ ಅವರು, “ಮಹಿಳಾ ಸಬಲೀಕರಣ ಮತ್ತುಸುಸ್ಥಿರಇಂಧನ ಆಧಾರಿತ ಗ್ರಾಮೀಣ ಅಭಿವೃದ್ಧಿಗೆ ತಕ್ಕುದಾದ ಕೌಶಲಗಳನ್ನು ಬೆಳೆಸು ವಲ್ಲಿ ಬಿವಿಟಿ ಮಹತ್ತರ ಪಾತ್ರವಹಿಸಿದೆ. ಕಳೆದ ಎರಡು ದಶಕಗಳಲ್ಲಿ,1000ಕ್ಕೂಹೆಚ್ಚು ಸಿಬ್ಬಂದಿಗಳಿಗೆ ಬಿವಿಟಿ ತರಬೇತಿ ನೀಡಿದ್ದು, ಯುವಕರಿಗೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಇದೊಂದು ಅವಕಾಶವನ್ನು ಸೃಷ್ಟಿಸಿದೆ.
ನೇರವಾಗಿ ಪಾಲುದಾರರಿಗೆ ಮತ್ತು ಅಂತಿಮ ಬಳಕೆದಾರರಿಗೆ ತರಬೇತಿ ನೀಡುವ ಈ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಿ, ಪುನರಾವರ್ತಿಸಿ, ಸ್ಥಾಪಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ಮಾಡುವುದು ನಮ್ಮ ಧ್ಯೇಯವಾಗಿದೆ,”ಎಂದರು.
 
 
 
 
 
 
 
 
 
 
 

Leave a Reply