ರಾಜ್ಯಮಟ್ಟದ “ಅಂಚೆ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆ”ಯಲ್ಲಿ ಭಾಗ್ಯಶ್ರೀ ಕಂಬಳಕಟ್ಟ ಪ್ರಥಮ

ರಾಜ್ಯಮಟ್ಟದ “ಅಂಚೆ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆ”ಯಲ್ಲಿ ಭಾಗ್ಯಶ್ರೀ ಕಂಬಳಕಟ್ಟ ಇವರಿಗೆ ಪ್ರಥಮ ಬಹುಮಾನ ಲಭಿಸಿದೆ.

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 34ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ “ಅಂಚೆ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆ”ಯಲ್ಲಿ ಉಡುಪಿ ಜಿಲ್ಲೆಯ ಕೊಡವೂರಿನ ಶ್ರೀಮತಿ ಭಾಗ್ಯಶ್ರೀ ಕಂಬಳಕಟ್ಟ ಇವರಿಗೆ ಪ್ರಥಮ ಬಹುಮಾನ ಲಭಿಸಿದೆ. ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಗಡಿನಾಡು ಕನ್ನಡಿಗರಿಂದ ಸುಮಾರು 1965 ಕಾರ್ಡುಗಳು ಸ್ಪರ್ಧೆಗೆ ಬಂದಿದ್ದವು. ಸ್ಪರ್ಧೆಯ ತೀರ್ಪುಗಾರರೂ, ಸಂಸ್ಥೆಯ ಸಂಸ್ಥಾಪಕರೂ ಆದ ಸಾಲಿಗ್ರಾಮ ಗಣೇಶ್ ಶೆಣೈ ಹಾಗೂ ಕಲಾ ಕುಂಚದ ಸರ್ವ ಸದಸ್ಯರು ಪದಾಧಿಕಾರಿಗಳು ವಿಜೇತರಿಗೆ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

 
 
 
 
 
 
 
 
 
 
 

Leave a Reply