ಅಭಿನಯ ಗೀತೆಯಲ್ಲಿ ಪ್ರಥಮ ಬಹುಮಾನ ಪಡೆದ ಅಮೋಘ್ ಕಂಬಳಕಟ್ಟ

ಬೆಂಗಳೂರಿನ ಕಲಾಚಾವಡಿ ಮುಖಹೊತ್ತಿಗೆಯ ಸಮೂಹದವರು ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಅಭಿನಯ ಗೀತೆ ಸ್ಪರ್ಧೆಯಲ್ಲಿ ಉಡುಪಿಯ ಆದಿವುಡುಪಿ ಆಂಗ್ಲಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಅಮೋಘ್ ಕಂಬಳಕಟ್ಟ ಇವರಿಗೆ ಪ್ರಥಮ ಬಹುಮಾನ ಲಭಿಸಿದೆ. ಅಜ್ಜಿ ಪಾತ್ರಧಾರಿಯಾಗಿ ಅಮೋಘ್ ಮಾಡಿದ ಅಭಿನಯಗೀತೆಯು ಎಲ್ಲರ ಮೆಚ್ಚುಗೆ ಗಳಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.ಮುಖ್ಯ ಅತಿಥಿಗಳಾಗಿ ಗಾಯಕಿಯರಾದ ಡಾ.ಹೇಮಾ ಪ್ರಸಾದ್ ಮತ್ತು ಡಾ.ಮನೋನ್ಮಣಿಯವರು ಪಾಲ್ಗೊಂಡಿದ್ದರು. ಕಲಾಚಾವಡಿಯ ಮುಖ್ಯಸ್ಥೆ ಶ್ರೀಮತಿ ಚಂದ್ರಿಕಾ ಬದರಿನಾಥ್ ಹಾಗೂ ನಿರ್ವಾಹಕಿಯರಾದ ಶ್ರೀಮತಿ ಲಕ್ಷ್ಮೀಶ್ರೀ ಉಪಾಧ್ಯ, ಶ್ರೀಮತಿ ದೀಪಾ ಜೋಯಿಸ್, ಶ್ರೀಮತಿ ರಮಾ ಪಿ.ರಾವ್ ಹಾಗೂ ಶ್ರೀಮತಿ ರಶ್ಮಿ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply