ಕೊಡವೂರಿನಲ್ಲಿ ರಾಮೋತ್ಸವ

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ (SASS) ಇದರ ಜಿಲ್ಲಾ ಘಟಕ, ಜಿಲ್ಲಾ ಮಹಿಳಾ ಘಟಕ, ಕೊಡವೂರು, ಶ್ರೀ ಶಿರಡಿ ಸಾಯಿಬಾಬಾ ಮಂದಿರ ತೋಟದಮನೆ, ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಇವರ ಜಂಟಿ ಆಶ್ರಯದಲ್ಲಿ, ಜನವರಿ 21 ನೇ ತಾರೀಕು ಭಾನುವಾರದಂದು, ಕೊಡವೂರಿನ ಶ್ರೀ ಶಿರಡಿಸಾಯಿಬಾಬಾ ಮಂದಿರದಲ್ಲಿ “ ಶ್ರೀ ರಾಮೋತ್ಸವ” ಕಾರ್ಯಕ್ರಮವು ನಡೆಯಲಿದ್ದು, ಶಾಲಾ ವಿದ್ಯಾರ್ಥಿಗಳಿಗಾಗಿ ಮುದ್ದುರಾಮ ಸ್ಪರ್ಧೆ ಹಾಗೂ, ಪ್ರಭು ಶ್ರೀರಾಮನ ಚಿತ್ರ ಬಿಡಿಸುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯೂ ನಡೆಯಲಿರುವುದು.

ಸ್ಪರ್ಧೆಗಾಗಿ ಹೆಸರು ನೋಂದಾಯಿಸಲು ಬಯಸುವ ವಿದ್ಯಾರ್ಥಿಗಳು ಜನವರಿ 18 ರ ಒಳಗಾಗಿ ಈ ಕೆಳಗೆ ನಮೂದಿಸಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಬೇಕಾಗಿ ಕಾರ್ಯಕ್ರಮದ ಸಂಯೋಜಕರಾಗಿರುವ ಶ್ರೀ ವಿಜಯ್ ಕೊಡವೂರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬೆಳಗ್ಗೆ 9 ಗಂಟೆಗೆ ಸರಿಯಾಗಿ ನಡೆಯುವ ಸ್ಪರ್ಧೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ನಡೆಯುವುದು. ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ವಿದ್ದು, 10 ಆಕರ್ಷಕ ಪ್ರೋತ್ಸಾಹ ಬಹುಮಾನಗಳನ್ನೂ ನೀಡಲಾಗುವುದು. ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ:-7676213368.ರಂಜಿತ್ ಶೆಟ್ಟಿ.
9448216491.ಗಣೇಶ್ ಕೋಟ.

 
 
 
 
 
 
 
 
 
 
 

Leave a Reply