ಮಂಗಳವಾರದಂದು ಪೆರಂಪಳ್ಳಿ ಸಮೀಪ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಮುಂಜಾನೆಯಿಂದಲೇ ನೂರಾರು ಮಂದಿ ಭಕ್ತರು ಹುಬ್ಬಳ್ಳಿ ಬೆಂಗ್ಳೂರು ಮೈಸೂರು ಮಂಡ್ಯ , ಚಿತ್ತೂರು ( ಆಂಧ್ರ) ಕೋಲಾರ ಪ್ರದೇಶಗಳಿಂದ ಹಾಗೂ ಸ್ಥಳೀಯರು ಪವಿತ್ರ ನದೀ ಸ್ನಾನದಲ್ಲಿ ಪಾಲ್ಗೊಂಡರು.
ಶ್ರೀ ಪಲಿಮಾರು ಉಭಯ ಶ್ರೀಗಳು , ಶ್ರೀ ಪೇಜಾವರ , ಸೋದೆ ಶ್ರೀಗಳು , ಆಗಮಿಸಿ ಸ್ನಾನಗೈದು ಸ್ವರ್ಣಾರತಿ ಬೆಳಗಿದರು .