ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ವರ್ಣಿಸಿರುವ ಉಡುಪಿ ಸಮೀಪ ಎಲ್ಲೂರಿನ ಶ್ರೀವಿಶ್ವನಾಥ ದೇವರನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ಪಂಚಾಮೃತಾಭಿಷೇಕವನ್ನು ಮಾಡಿ ಪೂಜಿಸಿದರು.
ಶ್ರೀ ವಾದಿರಾಜರು ಇಲ್ಲಿ ರುದ್ರದೇವರನ್ನು ಸ್ತುತಿಸಿದ ಬಳಿಕ ನಂದಿಯ ಕೋರಿಕೆಯಂತೆ ನಂದಿ ಸ್ತುತಿಯನ್ನೂ ಮಾಡಿದ್ದಾರೆ.