ಏಪ್ರಿಲ್ 3 -ನಾಗ ತನುತರ್ಪಣ ಮಂಡಲ ಸೇವೆ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಎಪ್ರಿಲ್ ಮೂರರ ಸೋಮವಾರ ದಂದು ನಾಗ ತಾನು ತರ್ಪಣ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗ ದರ್ಶನದಲ್ಲಿ ನೆರವೇರಲಿದೆ..

ಆ ಪ್ರಯುಕ್ತ ಕ್ಷೇತ್ರದ ನಾಗಾಲಯದಲ್ಲಿ ಬೆಳಿಗ್ಗೆ ನವಕ ಕಲಶ ಪ್ರಧಾನ ಹೋಮ ಕಲಶಾ ಅಭಿಷೇಕ ಸುಬ್ರಹ್ಮಣ್ಯ ದೇವರಿಗೆ ಪವಮಾನ ಕಲಶಾಭಿಷೇಕ ಪ್ರಸನ್ನ ಪೂಜೆ ಮಹಾಪೂಜೆ ಮಹಾ ಅನ್ನಸಂತರ್ಪಣೆ ನೆರವೇರಲಿ ರುವುದು

ಸಮಸ್ತ ನಾಗದೋಷ ಪರಿಹಾರಾರ್ಥವಾಗಿ ಸರ್ವ ಪ್ರಾಯಶ್ಚಿತ್ತ ಪೂರ್ವಕವಾಗಿ ನೆರವೇರಲಿರುವ ಈ ಪೂಜೆಯು ಮುಂಬೈಯ ಗುರುಪ್ರೀತ್ ಕೌರ್ ರವರ ಬಾಪ್ತು ಸಂಪನ್ನಗೊಳ್ಳಲಿದೆ…

ಬೆಳಿಗ್ಗೆಯಿಂದಲೇ ಪಂಚವರ್ನಾತ್ಮಕವಾದ ಮಂಡಲ ರಚನೆಯು ಆರಂಭಗೊಳ್ಳಲಿದ್ದು ನಾಗ ತಾನು ತರ್ಪಣ ಮಂಡಲ ಪೂಜೆಯು ಸಂಜೆ ಗಂಟೆ 5 ರಿಂದ ಆರಂಭಗೊಳ್ಳಲಿ ರುವುದು..

ರಾತ್ರಿ ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕಾ ಆರಾಧನೆಗಳು ಅನ್ನ ಸಂತರ್ಪಣೆ ಹಾಗೂ ನಾಗ ಸಂದರ್ಶನ ಸೇವೆಯು ಕಲ್ಲಂಗಳ ರಾಮಚಂದ್ರ ಕುಂಜಿ ತ್ತಾಯ ಅವರಿಂದ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..

 
 
 
 
 
 
 
 
 
 
 

Leave a Reply