ದೀಪವು ಒಂದು ದಿವ್ಯ ಜ್ಯೋತಿ. ಅದರ ಬೆಳಕು ನಮಗೆ ಅಜ್ಞಾನದ ಋಣಾತ್ಮಕ ಅಂಧಕಾರದಿಂದ ಜ್ಞಾನದ ಧನಾತ್ಮಕ ಚಿಂತನೆಯೆಡೆಗೆ ಸಾಗಲು ಪ್ರೇರೇಪಿಸುತ್ತದೆ. ದೀಪವು ಸಂಪತ್ತು ,ಜ್ಞಾನ, ಸಂತೋಷ ,ನೆಮ್ಮದಿ ,ಆರೋಗ್ಯ ಮತ್ತು ಎಲ್ಲಾ ರೀತಿಯ ಐಶ್ವರ್ಯದ ಸಂಕೇತ. ತಾಮಸಿಕ ಮನಸ್ಸಿನ ದ್ವೇಷವೆಂಬ ಕತ್ತಲೆಯನ್ನು ನಾಶಮಾಡುವ ಶಕ್ತಿ ಹೊಂದಿರುವ ದೀಪವು ಪರಮಾತ್ಮನ ಕೃಪೆ ಹಾಗೂ ಪ್ರೀತಿ, ವಾತ್ಸಲ್ಯವನ್ನೂ ಹರಡುತ್ತದೆ.
ಮೂಡುಬೆಟ್ಟು ‘ಕಾವೇರಿ’ ನಿಲಯದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಹಣತೆ ದೀಪಗಳನ್ನು ಹಚ್ಚಿ ದೀಪಾವಳಿ ಹಬ್ಬ ಆಚರಿಸಿದ ಪರಿ.
ಕ್ಲಿಕ್ ~ಸುಶಾಂತ್ ಭಟ್ ಕೆರೆಮಠ