ನಿಲ್ಲದ ಟರ್ಕಿ-ಸಿರಿಯಾ ಭೀಕರತೆ

ದಶಕದಲ್ಲೇ ಅತಿ ಭೀಕರತೆಯ ಭೂಕಂಪವನ್ನು ಟರ್ಕಿ ಮತ್ತು ಸಿರಿಯಾ ಎದುರಿಸಿದ್ದು, ದಿನದಿನಕ್ಕೂ ಸಾವಿನ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇದೀಗ ಮೃತಪಟ್ಟವರ ಸಂಖ್ಯೆ 20.450ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಟ್ಟಡಗಳ ಅವಶೇಷಗಳಡಿ ಇನ್ನೂ ಸಾಕಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ.

 

ಟರ್ಕಿಗೆ ಪ್ರವಾಸ ಹೋಗಿದ್ದ ಭಾರತದ ಉತ್ತರಾಖಂಡ ನಿವಾಸಿ ವಿಜಯ್ ಕುಮಾರ್ ಗೌಡ್ ಕಾಣೆಯಾಗಿದ್ದಾರೆ. ಅವರು ತಂಗಿದ್ದ ಹೊಟೇಲ್ ಕುಸಿದುಬಿದ್ದಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಅವರ ಫೋನ್ ರಿಂಗ್ ಆಗುತ್ತಲೇ ಇದೆ, ಯಾರೂ ರಿಸೀವ್ ಮಾಡುತ್ತಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply