ಕೃಷ್ಣಾಂಗಾರಕ‌ ಚತುರ್ದಶಿ ಸ್ವರ್ಣಾ ನದೀ ಸ್ನಾನ

ಮಂಗಳವಾರದಂದು ಕೃಷ್ಣಾಂಗಾರಕ ಚತುರ್ದಶೀ ಯೋಗವಿದ್ದುದರಿಂದ ಉಡುಪಿಯ ಸ್ವರ್ಣಾನದಿಯಲ್ಲಿ ನೂರಾರು ಮಂದಿ ಪವಿತ್ರ ತೀರ್ಥ ಸ್ನಾನಗೈದರು.

ಕೃಷ್ಣಾಂಗಾರಕ ಸ್ನಾನಘಟ್ಟ ಇರುವ ಪೆರಂಪಳ್ಳಿ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬಳಿ ನೂತನ ಸ್ನಾನಘಟ್ಟ ನಿರ್ಮಾಣವಾಗುತ್ತಿರುವುದರಿಂದ ಅಲ್ಲಿ ತೀರ್ಥ ಸ್ನಾನವಿರಲಿಲ್ಲ . ಆದ್ದರಿಂದ ಮೈಸೂರು ಬೆಂಗಳೂರು ಸೇರಿದಂತೆ ನಾಡಿನ ಅನೇಕ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಕಲ್ಯಾಣಪುರದಲ್ಲಿ , ಹಿರಿಯಡ್ಕ ಸಮೀಪ ಪುತ್ತಿಗೆ ಮೂಲ ಮಠ , ಹಾಗೂ ಶೀರೂರು ಮೂಲಮಠದ ಬಳಿ ನದೀತೀರದಲ್ಲಿ ಪವಿತ್ರ ಸ್ವರ್ಣಾನದೀ ಸ್ನಾನಗೈದರು . ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಭಕ್ತರು ಶಿಷ್ಯರೊಂದಿಗೆ ಕಲ್ಯಾಣಪುರದಲ್ಲಿ ನದೀ ಸ್ನಾನಗೈದರು .

 
 
 
 
 
 
 
 
 
 
 

Leave a Reply