ಶ್ರೀರಾಮಸೇನೆ ಹೆಸರಲ್ಲಿ ದೇಣಿಗೆ ಸಂಗ್ರಹ. ಉಡುಪಿ ಜಿಲ್ಲಾ ಶ್ರೀ ರಾಮಸೇನೆ ಎಚ್ಚರಿಕೆ

ಶ್ರೀ ರಾಮಸೇನೆ ಸಂಘಟನೆ ಹೆಸರಲ್ಲಿ ಇತ್ತೀಚಿಗೆ ಕೆಲವರು ಅನಧಿಕೃತವಾಗಿ ಉಡುಪಿಯಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಆದರೆ ಉಡುಪಿ ಜಿಲ್ಲಾ ಶ್ರೀ ರಾಮಸೇನೆ ಸಂಘಟನೆ ಯಾವುದೇ ರೀತಿಯ ದೇಣಿಗೆ ಸಂಗ್ರಹಣೆ ಮಾಡುತ್ತಿಲ್ಲ, ಇದರ ಬಗ್ಗೆ ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಶ್ರೀ ರಾಮಸೇನೆ ಹೆಸರಲ್ಲಿ ಯಾರಾದರೂ ಹಣ/ದೇಣಿಗೆ ಕೇಳಿದರೆ ಕೂಡಲೇ ಸಂಬಂಧ ಪಟ್ಟ ಆರಕ್ಷಕ ಠಾಣೆಗೆ ದೂರು ನೀಡಬೇಕಾಗಿ ವಿನಂತಿ. ಹಾಗೂ ನಮಗೆ ಮಾಹಿತಿ ನೀಡಬೇಕಾಗಿ ( 9482093788, 9986871716, 9008557143) ವಿನಂತಿಸುತ್ತಿದ್ದೇವೆ, ಹಾಗೂ ದೂರು ನೀಡಿದವರಿಗೆ ಸಂಪೂರ್ಣ ಬೆಂಬಲವನ್ನು ನೀಡಲಿದ್ದೇವೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀ ಜಯರಾಮ್ ಅಂಬೆಕಲ್ಲು ಜಿಲ್ಲೆಯ ಜನತೆಗೆ ಈ ಮೂಲಕ ಮನವಿ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply