11 ಜಿಲ್ಲೆಯಲ್ಲಿ 45 ಕೇಸು, ಸೆರೆಮನೆ ಲಾಟಿ ಏಟು

ಸಂಘದ ಐಟಿಸಿ ಎಂದರೆ ಜಿಲ್ಲಾ ಪಂಚಾಯತ್ ಚುನಾವಣೆಗೆ ನಿಲ್ಲಲು ಇರುವ ಪ್ರವೇಶ ಪರೀಕ್ಷೆ ಎಂದು ತಿಳಿದುಕೊಂಡಿರುವ, ಮುತಾಲಿಕ್ ಕಾಲ ದೂಳಿಗೂ ಸರಿದೂಗದ ಕೆಲವು ಭಂಡ ಬಿಕನಾಸಿಗಳು ಅವರನ್ನು ಗಂಗೊಳ್ಳಿಗೆ ಬಾರದಂತೆ ತಡೆದ ಜಿಲ್ಲಾಡಳಿತದ ನಡೆಯನ್ನು ಸಮರ್ಥಿಸುವುದನ್ನು ಕಂಡಾಗ ನಿಷ್ಠಾವಂತ ಹಿಂದು ಕಾರ್ಯಕರ್ತರು ಕನಲಿ ಕೆಂಡವಾಗುವುದು ಸಹಜ. ತನ್ನ ಬದುಕಿನ ಬಹುಪಾಲನ್ನು ದೇಶ ಧರ್ಮ ಹಿಂದುತ್ವ ಎಂದೆಲ್ಲ ಸವೆದ ಆ ಹಿರಿಜೀವಕ್ಕೆ ಈ ಇಳಿ ಹೊತ್ತಿನಲ್ಲಿ ನಿಷೇದ ಹೇರಿ ಅವಮಾನಿಸುತ್ತೀರಿ ಎಂದಾದರೆ ನಿಮಗೂ ಮತ್ತು ಸಾವರ್ಕರ್ ಅವರನ್ನು ಸತಾಯಿಸಿದ ಕಾಂಗ್ರೆಸ್ಸಿಗೂ ಏನಿದೆ ವ್ಯತ್ಯಾಸ?

ಆ ಪುಣ್ಯಾತ್ಮನಿಂದ ನಿಮ್ಮ ಜೋಳಿಗೆಗೆ ನಾಲ್ಕು ಓಟು ಹೆಚ್ಚು ಬಿದ್ದಿರಬಹುದು ಬಿಟ್ಟರೆ ಅವರಿಗೆ ನಿಮ್ಮಿಂದ ಆದ ಒಂದು ಉಪಕಾರ ತಿಳಿಸಿ. ದರಿದ್ರಗಳ…. ಮದ್ಯಾಹ್ನ ಬಾಯಿಗೆ ಸಿಹಿ ತಿನ್ನಿಸಿ ಪಕ್ಷಕ್ಕೆ ಕರೆಸಿ, ಬಾಯಿಗಿಟ್ಟ ಆ ಸಿಹಿ ಕರಗುವ ಮೊದಲೇ, ಯಾರೋ ಟಿವಿಯವನು ಎಷ್ಟೋ ವರ್ಷ ಹಳೆಯ ಸುದ್ದಿ ಹಾಕಿದ ಎಂದ ಮಾತ್ರಕ್ಕೆ ಎಳ್ಳಷ್ಟೂ ಕರುಣೆ ಇಲ್ಲದೇ ಪಕ್ಷದಿಂದ ಕಿತ್ತೊಗೆದು ನೀವು ಆ ಹಿರಿಜೀವಕ್ಕೆ ಮಾಡಿದ ಅಪಮಾನವನ್ನು ಸಮಾಜ ಇನ್ನೂ ಮರೆತಿಲ್ಲ.
ಇಲ್ಲೊಬ್ಬ ಪುಡಾರಿ ಹೇಳುತ್ತಾನೆ ಅವರು ಕೋಮು ಪ್ರಚೋದನೆ ಮಾಡುತ್ತಾರಂತೆ! ಬಪ್ಪರೇ ಮಗನೇ… ನೀವೆಲ್ಲಾ ಇಷ್ಟು ಕಾಲ ಹಿಂದು ಕಾರ್ಯಕರ್ತರ ಹೆಣದ ಮೆರವಣಿಗೆ ಮಾಡಿ ಅಲ್ಲೆಲ್ಲಾ ಹರಿಕಥಾ ಕಲಾಕ್ಷೇಪ, ಪುರಾಣ ಕಥಾ ಪಾರಾಯಣ ಮಾತ್ರ ಮಾಡಿ ಓಟು ಬಾಚಿಕೊಂಡ ಶಾಂತಿದೂತ ಗಾಂಧಿ ಎಕ್ಕಡದ ತುಂಡುಗಳು ಪಾಪ! ನಿಮ್ಮ ಜನ್ಮಕ್ಕಿಷ್ಟು…

ಚುನಾವಣೆ ಹತ್ತಿರ ಬಂದಾಗ ನಿಮಗೆ ರಾಜಕಾರಣಿಗಳಿಗೆ ಅಲ್ಲಲ್ಲಿ ದಂಗೆ ಗಲಭೆ ಕೊಲೆ ದೊಂಬಿ ನಡೆಯಬೇಕು.. ಆ ದಳ್ಳುರಿಯ ಕೆನ್ನಾಲಗೆಯಲ್ಲಿ ನಿಮ್ಮ ಧ್ವಜ ಪಟಪಟಿಸಬೇಕು. ಹಿಂದು ಕಾರ್ಯಕರ್ತರು ನೀವು ಅಧಿಕಾರ ಹಿಡಿದ ಕೂಡಲೇ ಹೋರಾಟಗಳನ್ನೆಲ್ಲ ತತ್ ತಕ್ಷಣವೇ ನಿಲ್ಲಿಸಿ ನಿಮ್ಮಗಳ ಇಂದ್ರವೈಭವ ಕಣ್ತುಂಬಿಕೊಂಡು ಪುನೀತರಾಗಿ ಸೆಂಟ್ರಿಂಗ್ ಪೇಂಟಿಂಗ್ ಕೆಲಸಕ್ಕೆ ಮತ್ತೆ ಹೊರಟು ಬಿಡಬೇಕು. ಮರುದಿನವೇ ನೀವು ಕೇಸರಿ ಶಾಲು ಲಟಾರಿ ಸ್ಕೂಟರ್ ಮೇಲೆ ಬಿಟ್ಟು ಹಡಗಿನಂತ ಹೊಚ್ಚ ಹೊಸ ಇನ್ನೋವಾ ಹತ್ತಬೇಕು.ಶಾಖೆ, ಪ್ರಖಂಡ, ಬೈಠಕ್ಕು, ಅಭ್ಯಾಸ ವರ್ಗ ಹೋರಾಟ ಎಂಬಿತ್ಯಾದಿ ಪದಗಳೆಲ್ಲ ಅಳಿದು ನಿಮ್ಮ ಬಾಯಲ್ಲಿ ಟೆಂಡರ್,ವರ್ಕ್ ಆರ್ಡರ್, ಕಂಪ್ಲಿಷನ್ ಸರ್ಟಿಫಿಕೇಟ್, ಡಿ ಪಿ ಆರ್, ಟ್ರಾನ್ಸ್ ಫಾರ್,ಮಿನಿಟ್, ಪಾರ್ಟಿ ಫಂಡ್ ಇದೇ ಶಬ್ದಗಳು ನಲಿಯಬೇಕು. ಕಾರ್ಯಕರ್ತ ಕೇಸು ಜಡಿದುಕೊಂಡು ನಿಮ್ಮ ಕಚೇರಿ ಬಾಗಿಲು ಕಾಯಬೇಕು. ನಿಮ್ಮ ಅಧಿಕಾರದ ಸೌಧಕ್ಕೆ ಮಣ್ಣುಹೊತ್ತು ಬೆನ್ನುಗೂನಾಗಿ ಸಮಾವೇಶಗಳ ದೂಳಲ್ಲಿ ಮಿಂದು ಬಿಸಿಲಿಗೆ ಕರಟಿ ಅಲ್ಲೆಲ್ಲೋ ಸಿಕ್ಕಿದ ಮಜ್ಜಿಗೆ ತೊಟ್ಟೆ ಚೀಪುತ್ತಾ ವೇದಿಕೆಯಲ್ಲಿರುವ ಪುಡಾರಿ ಮೈಕಿನಲ್ಲಿ “ದೇವದುರ್ಲಭ ಕಾರ್ಯಕರ್ತ” ಎನ್ನುತ್ತಿದ್ದಂತೆ ಅಂಗಿ ಕಾಲರಿನ ತುದಿಯಲ್ಲಿ ಮುಖ ವರಿಸಿಕೊಂಡು ಆ ಬಡಪಾಯಿ ಒಳಗೊಳಗೇ ಪುಳಕಿತಗೊಳ್ಳಬೇಕು. ಅವನ ಜನ್ಮ ಪಾವನ.!

ಕಾರ್ಯಕರ್ತರಿಗಾಗಿ ಒಂದು ತೊಟ್ಟು ಬೆವರು ಹರಿಸದಿದ್ದರೂ ಎಸಿ ಹಾವೆಯಲ್ಲಿ ಫ್ರೆಶ್ ಆಗಿರುವ ನಿಮ್ಮ ಮುಖಮಂಡಲಗಳಿಗೆ ಸಂಘದ ಬೊಟ್ಟು ಬೇರೆ ಕೇಡು. ಅಧಿಕಾರ ಸಿಗುವವರೆಗೆ ಹಿಂದುತ್ವ ಆಮೇಲೆ ಬ್ಯಾಲೆನ್ಸ್ ಪಾಲಿಟಿಕ್ಸ್… ವಿಶ್ವಮಾನವ ರಾಗುವ ಜಾತ್ಯತೀತತೆಯ ಹರಿಕಾರ ರಾಗುವ ತೆವಲು.

ಕಾಂಗ್ರೆಸ್ ಅರವತ್ತು ವರ್ಷದಲ್ಲಿ ಮಾಡಿದ ಭ್ರಷ್ಟಾಚಾರವನ್ನು ಈ ಬಿಜೆಪಿಯ ಪುಡಾರಿಗಳು ಕೇವಲ 20 ವರ್ಷದಲ್ಲಿ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಹಿಂದುತ್ವ ಎನ್ನುವುದೇನು ಬಿಜೆಪಿ ಗುತ್ತಿಗೆ ಪಡೆದಿದೆಯೇ? ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಹಿಂದುತ್ವದ ಪರ ಗಟ್ಟಿಯಾಗಿ ನಿಲ್ಲಬೇಕು. ಹಿಂದುಗಳಿಗೆ ಬಿಜೆಪಿಯೊಂದೇ ಅನಿವಾರ್ಯ ಎಂದಾದರೆ ಮಾತ್ರ ಈ ರೀತಿಯ ಉಡಾಫೆಗಳು,ನಿಷೇಧಗಳು, ಕೇಸಿನ ಬೆದರಿಕೆಗಳು,ಹುಟ್ಟಿಕೊಳ್ಳುತ್ತವೆ.

ಇಷ್ಟಕ್ಕೂ ಪ್ರಮೋದ್ ಮುತಾಲೀಕರನ್ನು ಈ ಪರಿ ದ್ವೇಷಿಸಲು ಆ ಯಪ್ಪ ಮಾಡಿದ ತಪ್ಪಾದರೂ ಏನು? ಅರವಿಂದ ಲಿಂಬಾವಳಿಯಂತೆ ಪಕ್ಕದವನ ಪೀಪಿ ಊದಲು ಹೋಗಿಲ್ಲ… ಜಾರಕಿಹೊಳಿಯಂತೆ ಕೆಂಪು-ಕಪ್ಪು ಎಂದು ಬಗೆ ಬಣ್ಣದ ಮಾತುಗಳನ್ನಾಡಿಲ್ಲ.. ಸದಾನಂದಗೌಡರಂತೆ ವಿಡಿಯೋ ಕಾಲಿನಲ್ಲಿ ಮತ್ಸ್ಯಯಂತ್ರ ಭೇದನೆಯನ್ನು ಪ್ರದರ್ಶಿಸಿಲ್ಲ.. ಈಶ್ವರಪ್ಪನಂತೆ ಎರಡೆರಡು ನೋಟು ಲೆಕ್ಕಮಾಡುವ ಮಷೀನ್ ಗಳನ್ನು ಮನೆಯಲ್ಲಿಟ್ಟುಕೊಂಡು ಅರ್ಧ ಜಿಲ್ಲೆಯನ್ನೇ ಖರೀದಿಸುವಷ್ಟು ಭ್ರಷ್ಟಾಚಾರ ಮಾಡಿಲ್ಲ. ಆರ್ ಅಶೋಕನಂತೆ ಒಕ್ಕಲಿಗ ಓಟುಗಳ ಕ್ರೋಡೀಕರಣಕ್ಕೆ ಪಕ್ಷವನ್ನು ಬಲಿ ಕೊಟ್ಟಿಲ್ಲ. ಒಂದು ಕಾಲದಲ್ಲಿ ಹಿಂದೂ ಕಾರ್ಯಕರ್ತರ ಅನ್ನದ ಬಟ್ಟಲಿಗೆ ಒದ್ದ ಕಾಂಗ್ರೆಸ್ಸಿನ ಸಚಿವರುಗಳು ನಿಮಗೆ ಆಪ್ತರಾಗುತ್ತಾರೆ. ಸಂಘವನ್ನು ನಖ ಶಿಕಾಂತ ದ್ವೇಷಿಸಿ ನೂರಾರು ಸ್ವಯಂಸೇವಕರನ್ನು ಜೈಲಿಗಟ್ಟಿದ ಪಾಪಿಗಳನ್ನು ಬಗಲಲ್ಲಿ ಕೂರಿಸಿ ಕೊಳ್ಳುತ್ತೀರಿ. ಆದರೆ ಮುತಾಲಿಕರು ಮಾತ್ರ ನಿಮಗೆ ಪಥ್ಯ ಆಗಲ್ಲ. ಮೋದಿ ಹೆಸರಲ್ಲಿ ಗೆಲ್ಲುವ ಗ್ಯಾರಂಟಿ ಇದೆ. ಈಗ ನಿಮಗೆ ಹಿಂದುತ್ವ ಎಂದರೆ ಕೋಮು ಪ್ರಚೋದನೆ ಅಲ್ಲವೇ?

ಬಸ್ಸು ನಿಲ್ದಾಣದಲ್ಲಿ ಬಸವನನ್ನು ತೋರಿಸಿ ಹಲ್ಲುಗಿಂಜಿ ಭಿಕ್ಷೆ ಬೇಡುವ ಬಿಕನಾಸಿಗಳಿಗೂ, ತಾವು ಏನೂ ದುಡಿಯದೇ ಅಧಿಕಾರ ಅನುಭವಿಸಿ ದಂಡಿಯಾಗಿ ದುಡ್ಡು ಮಾಡಿ ಚುನಾವಣೆ ಬಂದಾಗ ಮೋದಿ ಮತ್ತು ಯೋಗಿಯನ್ನು ತೋರಿಸಿ ಮತ ಬೇಡುವ ಬಿಜೆಪಿಯ ನಾಯಕರಿಗೂ ಏನೂ ವ್ಯತ್ಯಾಸವಿಲ್ಲ. ಅಂತವರೆಲ್ಲ ಹಿಂದಿಲ್ಲ ಮುಂದಿಲ್ಲ ನಾಳೆ ಸತ್ತರೆ ಸಮಾಜವೇ ಸುಡಬೇಕು ಎಂಬಂತೆ ಬದುಕುತ್ತಿರುವ ಮುತಾಲಿಕರ ಬಗ್ಗೆ ಕೀಳಾಗಿ ಮಾತನಾಡುವಾಗ ಕಮಲದಡಿಯ ಕೆಸರೆಲ್ಲ ಇವುಗಳ ಬಾಯಿಯಿಂದಲೇ ಒಸರಿದಂತೆನಿಸಿ ವಾಕರಿಕೆ ಹುಟ್ಟುತ್ತದೆ.

ಬಿಜೆಪಿಯನ್ನು ಪದೇಪದೇ ಪ್ರಶ್ನಿಸುತ್ತಿರುವುದು ಮುತಾಲಿಕ್ ಅವರ ತಪ್ಪು ಎಂದಾದರೆ ಅಂತ ತಪ್ಪನ್ನು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಮಾಡಲೇಬೇಕು. ಕಾರ್ಯಕರ್ತ ಪಕ್ಷವನ್ನು ಪ್ರಶ್ನಿಸದೆ ಹೋದರೆ ಪಕ್ಷದೊಳಗೆ ಸರ್ವಾಧಿಕಾರಿ ಮನೋಭಾವ ಬೆಳೆದು ಆ ಪಕ್ಷ ಕಾರ್ಯಕರ್ತರಿಗೆ ಸಮಾಜಕ್ಕೆ ಕಂಟಕವಾಗುವ ಪಟ್ಟಭದ್ರ ಹಿತಾಸಕ್ತಿಗಳ ಆಡಂಬೋಲವಾಗುವ ಅಪಾಯವಿದೆ.

ಮುತಾಲಿಕರ ನನ್ನ ಬಳಿ ಹೇಳಿದ ಕೊನೆಯ ಮಾತು ಬಹಳ ಕಾಡಿತು. ಕಾಂಗ್ರೆಸ್ಸಿನವರಾದರೆ ನಮ್ಮನ್ನು ಕೋಮುವಾದಿಗಳು, ದಂಗೆಕೋರರು, ಫ್ಯಾಸಿಸ್ಟ್ ಶಕ್ತಿಗಳು ಎಂದೆಲ್ಲ ಬೈಯುತ್ತಾರೆ ಅದನ್ನು ಕೇಳಿ ಸುಮ್ಮನಿರಬಹುದು. ಆದರೆ ಈ ಬಿಜೆಪಿಯವರು ಹಾಗಲ್ಲ ಅವರು ನಮ್ಮನ್ನು ಧರ್ಮದ್ರೋಹಿಗಳು, ದೇಶದ್ರೋಹಿಗಳು, ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ ಇದನ್ನು ಅರಗಿಸಿಕೊಳ್ಳುವ ಶಕ್ತಿ ನನ್ನಲ್ಲಿಲ್ಲ ಎನ್ನುತ್ತಿದ್ದಂತೆ ಅವರ ಗಂಟಲಿನ ಸೆರೆ ಬಿಗಿದುಕೊಂಡಿತು. ಪಾಪ ಭಾವುಕ ಮನುಷ್ಯ. ಬಿಜೆಪಿಯದ್ದು ಇದು ಕೃತಘ್ನತೆಯ ಪರಮಾವಧಿ.

 
 
 
 
 
 
 
 
 
 
 

Leave a Reply