ವಿದ್ಯಾ ವಿಕಾಸ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ಶಿಬಿರಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ

ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವಿದ್ಯಾ ವಿಕಾಸ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ಶಿಬಿರಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿದರು. ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ಶಿಬಿರದ ಮೊದಲ ಅವಧಿಯಲ್ಲಿ ಮಾತನಾಡಿದ ಅವರು ಶಿಶು ಶಿಕ್ಷಣ ಮೂರನೇ ವರ್ಷದಿಂದ ಎಂಟನೇ ವರ್ಷದ ಮಕ್ಕಳಿಗೆ ನೀಡುವ ಸಮಗ್ರ ಶಿಕ್ಷಣವಾಗಿದೆ. ಎನ್ ಇ ಪಿ ಯಲ್ಲಿ ಹೇಳಲಾದ ಬುನಾದಿ ಶಿಕ್ಷಣದಲ್ಲಿ ನಮ್ಮ ಧರ್ಮ, ಸಂಸ್ಕೃತಿ ,ಸಂಸ್ಕಾರಗಳ ಶಿಕ್ಷಣ ಅಡಗಿದೆ.ಕಲ್ಲಿಗೆ ರೂಪ ನೀಡಿದರೆ ಅದು ಉದ್ಭವ ಲಿಂಗರೂಪ ಹೊಂದುತ್ತದೆ. ದೇಶಕ್ಕಾಗಿ ಬಲಿದಾನ ಮಾಡಿಕೊಳ್ಳಲು ಹಿಂಜರಿಯದ ವೀರ ಯೋಧರ ದೇಶಭಕ್ತಿಯನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕಿದೆ ಎಂದರು.ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಗುರುದಾಸ ಶೆಣೈ ಬರಮಾಡಿಕೊಂಡರು , ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರದ ಶಿಶುವಾಟಿಕಾ ಸಹ ಪ್ರಮುಖ್ ಶ್ರೀಮತಿ ತಾರ ಕೆ , ಅಮೃತ ಭಾರತಿ ಸಂಸ್ಥೆಯ ಮಾತೃಭಾರತಿಯ ಅಧ್ಯಕ್ಷರು ಶ್ರೀಮತಿ ವೀಣಾ ಭಟ್ ವರಂಗ ಉಪಸ್ಥಿತರಿದ್ದರು.

ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಜಿ.ಆರ್ ಜಗದೀಶ್ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಶ್ರೀ ವಸಂತಮಾಧವ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ಉಮೇಶ್ ಎಂ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ಶ್ರೀ ಮಹೇಶ್ ಹೈಕಾಡಿ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಶಿಶುವಾಟಿಕಾ ಶಿಕ್ಷಣ ಪ್ರಮುಖ ಶ್ರೀಮತಿ ಸ್ವರ್ಣ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಅಪರ್ಣಾ ಆಚಾರ್ , ಶ್ರೀಮತಿ ಅನಿತಾ ಕುಮಾರಿ ,ಶ್ರೀಮತಿ ಶಕುಂತಲಾ , ಪ್ರಾಂಶುಪಾಲ ಶ್ರೀ ಅರುಣ ಕುಮಾರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply