ಉಡುಪಿ ಅಂಚೆ ವಿಭಾಗದಿಂದ ಟಾಟಾ ಸಮೂಹ ಅಪಘಾತ ವಿಮೆಯ ಪರಿಹಾರ ಧನ ಹಸ್ತಾಂತರ

ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಕುಂದಾಪುರದ ದಿ.ಭಾಸ್ಕರ ಶೆಟ್ಟಿಯವರು ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ( ಐಪಿಪಿಬಿ) ಮುಖಾಂತರ ಟಾಟಾ ಸಮೂಹ ಅಪಘಾತ ವಿಮೆ ( ಟಾಟಾ ಗ್ರೂಪ್ ಆಕ್ಸಿಡೆಂಟಲ್ ಇನ್ಯೂರೆನ್ಸ್) ಯಲ್ಲಿ ವಾರ್ಷಿಕ ರೂ. 399/- ಪಾವತಿಸಿ ಪಾಲಿಸಿ ಪಡೆದಿದ್ದರು.

ಅವರು ಅಪಘಾತದಲ್ಲಿ ಮರಣ ಹೊಂದಿದಾಗ ನಾಮ ನಿರ್ದೇಶಿತ ಅವರ ಪತ್ನಿ ಶ್ರೀಮತಿ ಸವಿತಾ ಬಿ ಶೆಟ್ಟಿ ಯವರಿಗೆ ಪರಿಹಾರ ಧನವಾಗಿ ರೂ.10 ಲಕ್ಷದ ಚೆಕ್ ನ್ನು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಸುರೇಶ್ ಗುಪ್ತರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ , ಕುಂದಾಪುರ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಮಂಜುನಾಥ್, , ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉಡುಪಿ ಶಾಖೆಯ ಮ್ಯಾನೇಜರ್ ಸ್ಮಿತಾ ಜೆ ಎಸ್ ,ಸಿಬ್ಬಂದಿ ನಿಖಿಲ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply